News Karnataka Kannada
Thursday, May 09 2024
ಉಡುಪಿ

ಉಡುಪಿ: ಮಲ್ಪೆ ಬೀಚ್‌ ಗೆ ನಾರಾಯಣಗುರು ಹೆಸರಿಡುವಂತೆ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಒತ್ತಾಯ

Aam Aadmi Party candidate demands naming Malpe beach after Narayana Guru
Photo Credit : News Kannada

ಉಡುಪಿ: ಇಲ್ಲಿನ ಬ್ರಹ್ಮಗಿರಿ ಸರ್ಕಲ್’ನಿಂದ ಎಸ್ಪಿ ಕಚೇರಿಗೆ ಹೋಗುವ ರಸ್ತೆಯನ್ನು ಈ ಹಿಂದೆ ಇದ್ದಂತೆ ನಾರಾಯಣಗುರು ರಸ್ತೆ ಎಂದು ಮರುನಾಮಕರಣ ಮಾಡುವಂತೆ ಉಡುಪಿ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಪ್ರಭಾಕರ ಪೂಜಾರಿ ಒತ್ತಾಯಿಸಿದ್ದಾರೆ.

ಪ್ರಸಕ್ತ ಈ ರಸ್ತೆಯ ಹೆಸರನ್ನು ನಗರಸಭೆ ನಾಡೋಜ ಡಾ.ಜಿ.ಶಂಕರ್ ರಸ್ತೆ ಎಂದು ನಾಮಕರಣ ಮಾಡಿದ್ದು, ಮೊದಲು ಈ ರಸ್ತೆಯ ಹೆಸರಿನ ಬೋರ್ಡ್ ನಾರಾಯಣಗುರು ರಸ್ತೆ ಎಂದೇ ಇತ್ತು. ಇದನ್ನು ಅಕ್ರಮವಾಗಿ ಮರುನಾಮಕರಣ ಮಾಡಲಾಗಿದೆ ಎಂದು ಬ್ರಹ್ಮಗಿರಿ ಸರ್ಕಲ್ ಬಳಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಧರಣಿಯ ವೇಳೆ ಪ್ರಭಾಕರ ಪೂಜಾರಿ ಆರೋಪ ಮಾಡಿದ್ದಾರೆ.

ಈ ರಸ್ತೆಯ ಹೆಸರನ್ನು ಮರುನಾಮಕರಣ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನ್ನಸತ್ಯಾಗ್ರಹ ಮಾಡುವ ಬೆದರಿಕೆ ಹಾಕಿದ ಅವರು, ಈ ರಸ್ತೆಗೆ ಅಕ್ರಮವಾಗಿ ನಾಮಕರಣ ಮಾಡಲಾಗಿದೆ ಎಂದು ದೂರಿದರು.

ಬಿಲ್ಲವ ಸಮುದಾಯದ ಮಹಾನ್ ಗುರುಗಳಾಗಿರುವ ನಾರಾಯಣ ಗುರುಗಾಲ ಹೆಸರು ತೆಗೆಯುವ ಮೂಲಕ ನಮ್ಮ ಮನಸಿಗೆ ಘಾಸಿಯುಂಟು ಮಾಡಿದ್ದಾರೆ. ಬಿಜೆಪಿಯವರ ಸೂಚನೆಯಂತೆ ನಗರ ಸಭೆಯವರು ಈ ಬೋರ್ಡ್ ಹಾಕಿದ್ದಾರೆ. ಇದಕ್ಕೆ ತಮ್ಮ ವಿರೋಧವಿದೆ ಎಂದು ಪ್ರಭಾಕರ ಪೂಜಾರಿ ಹೇಳಿದರು.

ಮಲ್ಪೆ ಬೀಚಿಗೆ  ನಾರಾಯಣಗುರು ಬೀಚ್ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದ ಪ್ರಭಾಕರ ಪೂಜಾರಿ, ಬೀಚಿಗೆ ಹೋಗುವ ರಸ್ತೆಯನ್ನು ಕೂಡ ನಾರಾಯಣಗುರು ರಸ್ತೆ ಎಂದು ನಾಮಕರಣ ಮಾಡಬೇಕು. ಇದು ನಮ್ಮ ಬೇಡಿಕೆಯಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು