News Karnataka Kannada
Monday, April 29 2024
ಉಡುಪಿ

ಕುಂದಾಪುರ: ಸಂಘಟನೆಗಳನ್ನು ಮಾಡಿಕೊಳ್ಳುವುದು ಸಂಘರ್ಷಕ್ಕಲ್ಲ – ಶ್ರೀಕಾಂತ್ ಶೆಟ್ಟಿ

Kundapur: Formation of organisations is not for conflict, says Srikanth Shetty
Photo Credit : News Kannada

ಕುಂದಾಪುರ: ಬೆಳೆಯುತ್ತಿರುವ ಜೌದ್ಯೋಗಿಕರಣದ ನೀತಿಯಿಂದ ಗ್ರಾಮಗಳು ಮುಳುಗಿ ಹೋಗಿವೆ ಜಗತ್ತಿನಲ್ಲಿ ಸಾಂಸ್ಕ್ರತಿಕ ವೈಭವವನ್ನು ಸಾರುತ್ತಿರುವ ಕರಾವಳಿಯ ವೈಶಿಷ್ಟ್ಯತೆ ಉಳಿಯಬೇಕಾದರೆ ಸಂಘಟನೆಗಳ ಹುಟ್ಟುವಿಕೆ ಅನಿವಾರ್ಯವಾಗಿದೆ ಎಂದು ರಾಷ್ಟ್ರೀಯತೆಯ ಪ್ರತಿಪಾದಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

ಕುಂದಾಪುರ ತಾಊಕಿನ ಹೊಸಾಡು ಗ್ರಾಮದ ಗಾಣದಮಕ್ಕಿ ಅಮ್ಮಚಿಕ್ಕು ದೈವಸ್ಥಾನದಲ್ಲಿ ಭಾನುವಾರ ನಡೆದ ವಾರ್ಷಿಕ ಹಬ್ಬದ ಪ್ರಯುಕ್ತ ಹೊಸಾಡು ಸಂಚಲನ ಸಂಘಟನೆ ವತಿಂಯಿಂದ ಆಯೋಜಿಸಿದ ಬೆಂಕಿನಾಥೇಶ್ವರ ಮೇಳದ ಯಕ್ಷಗಾನ ಕಾರ್ಯಕ್ರಮದಲ್ಲಿ ಸಂಚಲನ ಹೊಸಾಡು ನಾಫಲಕವನ್ನು ಅನಾವರಗೊಳಿಸಿ ಅವರು ಮಾತನಾಡಿದರು.

ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ ಪ್ರತಿಯೊಂದು ಊರಿನಲ್ಲಿಯೂ ಸಂಘಟನೆಗಳ ಪಾತ್ರ ಅಗತ್ಯವಿದೆ ಯುವಕರ ಕೂಡವಿಕೆಯಿಂದ ಗ್ರಾಮದ ಏಳಿಗೆ ಸಾಧ್ಯ ಸಂಘಟನೆಗಳನ್ನು ಮಾಡಿಕೊಳ್ಳುವುದು ಸಂಘರ್ಷಕ್ಕಲ್ಲ ಸಹಬಾಳ್ವೆ ಗೋಸ್ಕರ ಎಂದರು.

ಅಮ್ಮಚಿಕ್ಕು ದೈವಸ್ಥಾನದ ಆಡಳಿತ ಮೋಕ್ತೆಸರರಾದ ರಘು ಶೆಟ್ಟಿ ಕೇರಿಕೊಡ್ಲು ಮತ್ತು ಪಾತ್ರಿಗಳಾದ ಮಂಜಯ್ಯ ಶೆಟ್ಟಿ,ಹೊಸಾಡು ಸಂಚಲನ ಸಂಘಟನೆಯ ಸಂಚಾಲಕ ಮನೀಶ್ ಶೆಟ್ಟಿ ಜಾಜಿಮಕ್ಕಿ,ಶರತ್ ಶೆಟ್ಟಿ ಉಪ್ಪುಂದ,ಉಮೇಶ್ ಶೆಟ್ಟಿ,ನಾಗರಾಜ ಶೆಟ್ಟಿ ನೈಕಂಬಳಿ, ರಾಘವೇಂದ್ರ ಶೆಟ್ಟಿ, ಪ್ರದೀಪ್ ಬಿಲ್ಲವ, ಪ್ರವೀಣ ಪೂಜಾರಿ, ಮಹೇಶ್ ದೇವಾಡಿಗ , ಸುರೇಂದ್ರ ಶೆಟ್ಟಿ,ಡಾ.ಕಿಶೋರ್ ಕುಮಾರ್ ಶೆಟ್ಟಿ,ಪ್ರದೀಪ ಆಚಾರ್ಯ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು