ಉಡುಪಿ: ಮಣಿಪಾಲ ಅಂಚೆ ಕಚೇರಿ, ಮಣಿಪಾಲ ಬಸ್ ನಿಲ್ದಾಣ ಹಾಗೂ ಅಲೆವೂರು ಮೂಲಕ ಹಾದು ಬರುವ ಮೂರು ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಆರ್.ಎಸ್.ಬಿ ಸಭಾಭವನದ ಬಳಿ ವೃತ್ತ ನಿರ್ಮಿಸಿ, ಆ ವೃತ್ತಕ್ಕೆ ಡಾ. ಟಿಎಪೈ ಅವರ ಹೆಸರನ್ನು ಇಡಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಗ್ರಹಿಸಿದೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು, ಆರ್.ಎಸ್.ಬಿ ಸಭಾಭವನದ ಬಳಿ ಮೂರು ಪ್ರಮುಖ ರಸ್ತೆಗಳು ಸಂಧಿಸುತ್ತವೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಇಲ್ಲೊಂದು ವೃತ್ತ ನಿರ್ಮಿಸುವುದು ಅಗತ್ಯವಾಗಿದ್ದು, ಆ ವೃತ್ತಕ್ಕೆ ಮಣಿಪಾಲ ನವ ನಿರ್ಮಾಣದಲ್ಲಿ ಪ್ರಮುಖರಾಗಿದ್ದ ಡಾ. ದಿ. ಟಿಎ ಪೈ ಅವರ ಹೆಸರನ್ನಿಟ್ಟು, ಅವರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ್ ಪೈ, ಕಮಲಾಕ್ಷ ಪ್ರಭು ಇದ್ದರು.