News Karnataka Kannada
Saturday, April 27 2024
ಉಡುಪಿ

ಕುಂದಾಪುರ: ಸಾಮಾಜಿಕ ಕಾಳಜಿ ಮೆರೆದ ಡಾನ್‍ಬಾಸ್ಕೋ ಶಾಲೆ ವಿದ್ಯಾರ್ಥಿಗಳು

Students who showed social concern
Photo Credit : News Kannada

ಕುಂದಾಪುರ: ಹೊಸಾಡು ಗ್ರಾಮದ ಡಾನ್‍ಬಾಸ್ಕೋ ಶಾಲೆ ಕಾಂಪೌಂಡ್ ಬಳಿ ಹೊಸಾಡು ಕೆಸಿಡಿಸಿ ಗೇರು ಪ್ಲಾಂಟೇಶನ್‍ನಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿದ ಪರಿಣಾಮ ಬೆಂಕಿ ಕೆನ್ನಾಲಿಗೆಗೆ ಗೇರು ಮರಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದ ಘಟನೆ ಶುಕ್ರವಾರ ನಡೆದಿದೆ.

ಶಾಲೆ ಪಕ್ಕದಲ್ಲಿ ಬೆಂಕಿಯಿಂದ ಅನಾಹುತವಾಗಿರುವುದನ್ನು ಗ್ರಹಿಸಿದ ಡಾನ್‍ಬಾಸ್ಕೋ ಶಾಲೆಯ ವಿದ್ಯಾರ್ಥಿಗಳು ಸಕಾಲದಲ್ಲಿ ಎಚ್ಚೆತ್ತುಕೊಂಡು ಬಕೇಟ್ ಹಾಗೂ ಪೈಪ್ ಮೂಲಕ ನೀರನ್ನು ಹಾಯಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು ಶಾಲೆಯ ಪ್ರಿನ್ಸಿಪಾಲ್ ಮಕ್ಕಳಿಗೆ ಸಹಕರಿಸಿದರು.ವಿದ್ಯಾರ್ಥಿಗಳ ಸಾಮಾಜಿಕ ಮನೋಭಾವದ ಕಾರ್ಯ ಸಾರ್ವಜನಿಕರ ಪ್ರಶಂಸನೆಗೆ ಪಾತ್ರವಾಗಿದೆ.

ಹೊಸಾಡು ಮತ್ತು ತ್ರಾಸಿ ಪರಿಸರದಲ್ಲಿ ಬೆಸಿಗೆಯಲ್ಲಿ ಸಮಯದಲ್ಲಿ ಆಗಿಂದಾಗ ಬೆಂಕಿ ಅನಾಹುತದಂತಹ ಪ್ರಕರಣಗಳು ಸಂಭವಿಸುತ್ತಲೆ ಇದೆ.ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ಅಗ್ನಿ ಶಾಮಕ ದಳದ ವಾಹನವನ್ನು ನಿಯೋಜನೆ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕ್ಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು