ಕುಂದಾಪುರ: ಹೊಸಾಡು ಗ್ರಾಮದ ಡಾನ್ಬಾಸ್ಕೋ ಶಾಲೆ ಕಾಂಪೌಂಡ್ ಬಳಿ ಹೊಸಾಡು ಕೆಸಿಡಿಸಿ ಗೇರು ಪ್ಲಾಂಟೇಶನ್ನಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ತಗುಲಿದ ಪರಿಣಾಮ ಬೆಂಕಿ ಕೆನ್ನಾಲಿಗೆಗೆ ಗೇರು ಮರಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದ ಘಟನೆ ಶುಕ್ರವಾರ ನಡೆದಿದೆ.
ಶಾಲೆ ಪಕ್ಕದಲ್ಲಿ ಬೆಂಕಿಯಿಂದ ಅನಾಹುತವಾಗಿರುವುದನ್ನು ಗ್ರಹಿಸಿದ ಡಾನ್ಬಾಸ್ಕೋ ಶಾಲೆಯ ವಿದ್ಯಾರ್ಥಿಗಳು ಸಕಾಲದಲ್ಲಿ ಎಚ್ಚೆತ್ತುಕೊಂಡು ಬಕೇಟ್ ಹಾಗೂ ಪೈಪ್ ಮೂಲಕ ನೀರನ್ನು ಹಾಯಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು ಶಾಲೆಯ ಪ್ರಿನ್ಸಿಪಾಲ್ ಮಕ್ಕಳಿಗೆ ಸಹಕರಿಸಿದರು.ವಿದ್ಯಾರ್ಥಿಗಳ ಸಾಮಾಜಿಕ ಮನೋಭಾವದ ಕಾರ್ಯ ಸಾರ್ವಜನಿಕರ ಪ್ರಶಂಸನೆಗೆ ಪಾತ್ರವಾಗಿದೆ.
ಹೊಸಾಡು ಮತ್ತು ತ್ರಾಸಿ ಪರಿಸರದಲ್ಲಿ ಬೆಸಿಗೆಯಲ್ಲಿ ಸಮಯದಲ್ಲಿ ಆಗಿಂದಾಗ ಬೆಂಕಿ ಅನಾಹುತದಂತಹ ಪ್ರಕರಣಗಳು ಸಂಭವಿಸುತ್ತಲೆ ಇದೆ.ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ಅಗ್ನಿ ಶಾಮಕ ದಳದ ವಾಹನವನ್ನು ನಿಯೋಜನೆ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕ್ಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.