News Karnataka Kannada
Sunday, May 12 2024
ಉಡುಪಿ

ಉಡುಪಿಯಿಂದ ಅಯೋಧ್ಯೆಯತ್ತ ಹೊರಟ ರಜತ ಕಲಶಗಳು

Udupidvv
Photo Credit : News Kannada

ಉಡುಪಿ: ಅಯೋಧ್ಯೆ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ಜನವರಿ 22ರಂದು ಆಗಮೋಕ್ತ ವಿಧಿ ವಿಧಾನ ಪೂರ್ವಕ ಶ್ರೀರಾಮನ ನೂತನ ಶಿಲಾಬಿಂಬಕ್ಕೆ ಪ್ರಾಣ ಪ್ರತಿಷ್ಠೆ ನೆರವೇರಲಿದೆ.

ಜನವರಿ 23ರಿಂದ ಮಂದಿರದ ಟ್ರಸ್ಟಿಗಳಾಗಿರುವ ಶ್ರೀಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ 48 ದಿನಗಳ ಕಾಲ ಮಂಡಲೋತ್ಸವವು ನಡೆಯಲಿದೆ. ಪ್ರತಿನಿತ್ಯ ವೈದಿಕರಿಂದ ವಿವಿಧ ಹೋಮಹವನಗಳು ಜಪಾನುಷ್ಠಾನ ಪೂರ್ವಕ ಕಲಶಾಭಿಷೇಕಗಳು ನೆರವೇರಲಿವೆ.

ರಾಮನಿಗೆ ಪ್ರಿಯವಾಗುವಂತೆ ಕಲಶ ಪೂಜೆ ನೆರವೇರಿಸಲು ಶ್ರೀಗಳು, ರಾಮರಾಜ್ಯದ ಕಲ್ಪನೆ ಅನುಸಾರ ಯೋಜನೆ ರೂಪಿಸಿದ್ದು, ಅದರ ಸೇವಾದಾರರಾಗಬಯಸುವವರು ಪ್ರಸಕ್ತ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2023 ರಿಂದ ಮೊದಲ್ಗೊಂಡು) ಗೃಹ ನಿರ್ಮಾಣ, ಶಿಕ್ಷಣ, ಆರೋಗ್ಯ, ಗೋಸೇವೆ ಹೀಗೆ ಬಡವರ, ಸಮಾಜೋನ್ನತಿಯ ಸತ್ಕಾರ್ಯಗಳನ್ನು ಕನಿಷ್ಠ 5 ಲಕ್ಷ ರೂ ವೆಚ್ಚದಲ್ಲಿ ನಡೆಸಿರಬೇಕು ಅಥವಾ ಅಂತಹ ಕಾರ್ಯಗಳಲ್ಲಿ ನಿರತರಾಗಿರುವ ಸಂಸ್ಥೆಗಳಿಗೆ ಅಷ್ಟೇ ಮೊತ್ತದ ದೇಣಿಗೆ ನೀಡಿರಬೇಕು. ಹೀಗೆ ಒಂದು ರಜತ ಕಲಶಾಭಿಷೇಕದ ಸೇವಾದಾರರಾಗುವವರು ನೇರವಾಗಿ ತಮ್ಮ ಇಚ್ಛೆಯ ಆಭರಣ ಮಳಿಗೆಗಳಿಂದ ಕಲಶವನ್ನು ಖರೀದಿಸಿ ಸೂಚಿತ ಸೇವಾ ದಿನಾಂಕದ ಹಿಂದಿನ ದಿನ ಮಂದಿರಕ್ಕೆ ತಲುಪಿಸಿ, ಆ ದಿನಾಂಕದಂದು ಐತಿಹಾಸಿಕ ರಾಮ ಅಭಿಷೇಕದ ಕಲಶವನ್ನು ಪ್ರಸಾದ ರೂಪವಾಗಿ ಪಡೆಯ ಬಹುದಾಗಿದೆ .ಪ್ರಸ್ತುತ ಕೆಲವು ಕಲಶಗಳನ್ನು ಉಡುಪಿಯ ಪ್ರಸಿದ್ಧ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ನವರು ಕೆಲವು ಸೇವಾದಾರರ ಅಪೇಕ್ಷೆಯಂತೆ ಸಿದ್ಧಪಡಿಸಿದ್ದಾರೆ .ತಲಾ ಒಂದು ಕೆಜಿ ತೂಕವಿರುವ ಆಕರ್ಷಕ ವಿನ್ಯಾಸವಿರುವ ಈ ಕಲಶಗಳನ್ನು ಸದ್ಯವೇ ಅಯೋಧ್ಯೆಗೆ ಕಳುಹಿಸಲಾಗುವುದು .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು