ಉಡುಪಿ: ಕಾಂಗ್ರೆಸ್ ನವರು ಪ್ರಧಾನಿ ಕುರ್ಚಿ ಕಳೆದುಕೊಂಡು ವಿಲವಿಲನೇ ಒದ್ದಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರ ವಿರುದ್ಧ ಅಸಭ್ಯವಾಗಿ ಮತ್ತು ಅಸಹ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಬಿಜೆಪಿ ಬಗ್ಗೆ ಆಪಾದನೆಗಳು ಮತ್ತು ಪ್ರಧಾನಿ ಬಗ್ಗೆ ಟೀಕೆಗಳನ್ನು ಮಾಡುತ್ತಿದೆ. ಮೋದಿಯನ್ನು ವಿಷದ ಹಾವಿಗೆ ಹೋಲಿಕೆ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಎಲ್ಲರಿಗೂ ನೋವು ತಂದಿದೆ. ಇದು ಕೇವಲ ಖರ್ಗೆ ಅವರ ಹೇಳಿಕೆಯಲ್ಲ. ಇದು ಕಾಂಗ್ರೆಸ್ ಮಾತು ಮತ್ತು ಮಾನಸಿಕತೆಯಾಗಿದೆ ಎಂದು ಕಿಡಿಕಾರಿದರು.