ಕುಂದಾಪುರ: ವಾತಾವರಣದಲ್ಲಿ ಆದಂತಹ ಬದಲಾವಣೆಯಿಂದ ಹವಾಮಾನ ವೈಪರಿತ್ಯ ಉಂಟಾದ ಕಾರಣ ಕಡಲು ಪ್ರಕ್ಷುಬ್ಧಗೊಂಡಿದೆ ಬೃಹತ್ ಗಾತ್ರದ ಅಲೆಗಳು ಕಡಲ ತೀರಕ್ಕೆ ಅಪ್ಪಳಿಸುತ್ತಿದ್ದು ಮರವಂತೆ ಮತ್ತು ತ್ರಾಸಿ ಬೀಚ್ಗೆ ಆಗಮಿಸುವ ಪ್ರವಾಸಿಗರು ನೀರಿಗೆ ಇಳಿಯದೆ ಎಚ್ಚರ ವಹಿಸಬೇಕಾಗಿದೆ.
ಕಡಲ ಸೌಂದರ್ಯವನ್ನು ಕಣ್ಣ್ತುಂಬಿ ಕೊಳ್ಳಲು ವಿಶ್ವ ಪ್ರಸಿದ್ಧ ಮರವಂತೆ ಮತ್ತು ತ್ರಾಸಿ ಬೀಚಿಗೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಬೀಚ್ಗೆ ಆಗಮಿಸುವ ಪ್ರವಾಸಿಗರು ಕಡಲ ಕಿನಾರೆಗೆ ಇಳಿದು ಪುಟ್ಟ ಮಕ್ಕಳೊಂದಿಗೆ ನೀರಿನಲ್ಲಿ ಆಟವಾಡುತ್ತಾರೆ,ಬ್ರೆಕ್ ವಾಟರ್ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಮೊಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಾರೆ.
ಬೇಸಿಗೆಯ ಅವಧಿಯಲ್ಲಿ ಕಡಲು ಶಾಂತ ರೀತಿಯಲ್ಲಿ ವರ್ತಿಸಿದರೆ ಮಳೆಗಾಲದ ಅವಧಿಯಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುವ ಪರಿಣಾಮ ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತದೆ. ಮಳೆಗಾಲದ ಅವಧಿಯಲ್ಲಿ ಪ್ರವಾಸಿಗರಾಗಲಿ ಸ್ಥಳೀಯರಾಗಲಿ ಕಡಲಿಗೆ ಇಳಿಯುವುದು ಸೂಕ್ತವಲ್ಲ,ಬ್ರೆಕ್ ವಾಟರ್ ಮೇಲೇರಿ ಸೆಲ್ಫಿ ಫೋಟೋ ಗಳನ್ನು ಕ್ಲಿಕ್ಕಿಸುವುದು ಕೂಡ ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ.ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮರವಂತೆ ಮತ್ತು ತ್ರಾಸಿ ಬೀಚ್ಗೆ ದಿನಂಪ್ರತಿ ಸಾವಿರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ನೀರಿಗೆ ಇಳಿಯಬೇಡಿ ಎಂದು ಪ್ರವಾಸಿಗರಿಗೆ ಸ್ಥಳೀಯರು ಕಿವಿಮಾತು ಹೇಳಿದರು ಪ್ರವಾಸಿರಗು ಸ್ಥಳೀಯರ ಮಾತನ್ನು ಕೇಳದೆ ಕಡಲಿಗೆ ಇಳಿಯುತ್ತಿದ್ದಾರೆ. ಇದು ಮತಷ್ಟು ಆತಂಕಕ್ಕೆ ಕಾರಣವಾಗಿದೆ.