News Karnataka Kannada
Thursday, May 09 2024
ಉಡುಪಿ

ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಹೋಗಿ ಮೀನಿಗೆ ಗಾಳ ಹಾಕಿ ಕೂರಬೇಕಷ್ಟೇ-ಡಿಕೆಶಿ ವಿವಾದಾತ್ಮಕ ಹೇಳಿಕೆ

Pramod Madhwaraj has to go to the BJP and sit on the fish.
Photo Credit : News Kannada

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದರೂ ಅವರಿಗೆ ಏನೂ ಸಿಕ್ಕಿಲ್ಲ ಹಾಗಾಗಿ ಅವರು ಮೀನಿಗೆ ಗಾಳ ಹಾಕಿಕೊಂಡು ಕೂರಬೇಕಷ್ಟೆ ಎಂದು ಹೇಳಿರುವ ಮಾತು ವಿವಾದಕ್ಕೆ ಈಡಾಗಿದೆ.

ಬೇಡ ಬೇಡ ಎಂದಿದ್ದರೂ ಕೂಡ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದ್ದರು ಆದರೆ ಅವರಿಗೆ ಅಲ್ಲಿ ಯಾವುದೇ ರೀತಿ ಸ್ಥಾನಮಾನ ದೊರೆತ್ತಿಲ್ಲ.ಕನಿಷ್ಠ ಪಕ್ಷ ಬಿಜೆಪಿ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ಸಿಕ್ಕಿಲ್ಲ ಹಾಗಾಗಿ ಅವರು ಮೀನಿಗೆ ಗಾಳ ಹಾಕಿಕೊಂಡು ಕೂರಬೇಕು.ಅವರು ಎಂಎಲ್‍ಸಿ ಆಗುವ ಆಸೆಯನ್ನು ಬಿಟ್ ಬಿಡೋದು ಒಳ್ಳೆಯದು ಮಧ್ವರಾಜ್ ಬಿಜೆಪಿಗೆ ಹೋದರು ಅವರ ಜತೆ ಒಬ್ಬನೇ ಒಬ್ಬ ಕಾರ್ಯಕರ್ತ ಕೂಡ ಹೋಗಿಲ್ಲ ಅದಕ್ಕಾಗಿ ನಾನು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.

ಅಭಿಮಾನಿಗಳು ಆಕ್ರೋಶ ಪ್ರಮೋದ್ ಮಧ್ವರಾಜ್ ಅವರು ಮೀನಿಗೆ ಗಾಳ ಹಾಕಿಕೊಂಡು ಕೂರಬೇಕಷ್ಟೇ ಎಂದು ಹೇಳಿರುವ ಮಾತಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿರುವ ಅವರ ಅಭಿಮಾನಿಗಳು. ಡಿಕೆಶಿ ಅವರೇ ಮೀನಿಗೆ ಗಾಳ ಹಾಕೋದು ಅವಮಾನವೇ ಎಂದು ಪ್ರಶ್ನೆ ಮಾಡಿದ್ದಾರೆ. ಗಾಳ ಹಾಕಿ ಮೀನು ಹಿಡಿಯುವ ಸಮುದಾಯದವರನ್ನು ವ್ಯಂಗ್ಯ ಮಾಡಿರುವುದು ಸರಿ ಅಲ್ಲಾ, ಅಷ್ಟಕ್ಕೂ ಗಾಳ ಹಾಕಿ ಮೀನು ಹಿಡಿದವರು ತಿಹಾರ್ ಜೈಲಿಗೆ ಹೋಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು