News Karnataka Kannada
Saturday, April 27 2024
ಉಡುಪಿ

ರಾಷ್ಟ್ರೀಯ ಹೆದ್ದಾರಿ-169 : ವಾಹನ ಚಾಲಕರಿಗೆ ಸವಾಲಾದ ರಾಷ್ಟ್ರೀಯ ಹೆದ್ದಾರಿ

National Highway-169: A challenge for motorists
Photo Credit : News Kannada

ಕಾರ್ಕಳ: ಮೂಡುಬಿದಿರೆ- ಕಾರ್ಕಳ ನಡುವೆ ಹಾದೂ ಹೋಗಿರುವ ರಾಷ್ಟ್ರೀಯ ಹೆದ್ದಾರಿ -169ಯ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ವಾಹನ ಚಾಲಕ-ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ಸಾಣೂರು ಗ್ರಾಮದ ಮುರತಂಗಡಿ ಪರಿಸರದಲ್ಲಿ ಪ್ರಶಾಂತ್ ಕಾಮತ್ ರವರ ಮನೆಯ ಎದುರಿನ ಸರ್ವಿಸ್ ರೋಡಿನಿಂದ ಇರುವತ್ತೂರು ರೋಡಿಗೆ ಮಾಡಿರುವ ತಾತ್ಕಾಲಿಕ ರಸ್ತೆ ವ್ಯವಸ್ಥೆ ಅಗಲ ಕಿರಿದಾಗಿದ್ದು… ಇದರಿಂದ ವಾಹನ ಚಲಾಸಲು ಕಷ್ಟಕರವಾಗಿದೆ. ಎದುರು ಬದುರಾಗಿ ಘನವಾಹಗಳು ಸಿಕ್ಕಾಗ ಕೆಲ ಕಾಲ ರಸ್ತೆ ಸಂಚಾರ ಮೊಟಕುಗೊಳ್ಲುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಅಳವಡಿಸಲಾಗಿದ್ಹಾದ ಒಂದು ಸಣ್ಣ ಮೋರಿ ಪೈಪ್ ಮುರಿದುಹೋಗಿದ್ದು .. ಈಗಾಗಲೇ ಬೈಕ್ ಚಾಲಕರು ಹಾಗೂ ಇತರ ವಾಹನ ಚಾಲಕರು ಬಹಳ ಕಷ್ಟಪಟ್ಟು ಅಪಾಯಕಾರಿ ರೀತಿಯಲ್ಲಿ ರಸ್ತೆಯ ಮೇಲೆ ಸಂಚರಿಸುತ್ತಿದ್ದಾರೆ.

ಕೂಡಲೇ ಈ ತಾತ್ಕಾಲಿಕ ರಸ್ತೆಯ ಅಡಿಯ ಮೋರಿಯನ್ನು ಇನ್ನಷ್ಟು ಭದ್ರಪಡಿಸಿ ರಸ್ತೆಯನ್ನು ಅಗಲ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ದಿಲೀಪ್ ಬಿಲ್ಡ್ ಕಾನ್ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇಲಾಖಾಧಿಕಾರಿಗಳು ಹಾಗೂ ಕಂಟ್ರಾಕ್ಟರ್ ದಾರರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಇನ್ನಷ್ಟು ದೊಡ್ಡ ಅಪಾಯ ಸಂಭವಿಸಬಹುದೆಂಬ ಭೀತಿಯನ್ನು ಸ್ಥಳೀಯರು ಹಾಗೂ ವಾಹನ ಚಾಲಕರು,ಸವಾರರು ವ್ಯಕ್ತಪಡಿಸುತ್ತಾರೆ.

ಮತ್ತೊಂದೆಡೆಯಲ್ಲಿ ಸಾಣೂರು ಯುವಕ *ಮಂಡಲದ ಮೈದಾನದ ಎದುರು ಭಾಗದಲ್ಲಿ ಕೂಡಲೇ ತಡೆಗೋಡೆ ನಿರ್ಮಿಸುವ ಅಗತ್ಸಯವೂ ಇದೆ. ಇಲ್ದಿಲದಿದ್ದಲ್ಲಿ ಮಣ್ಣು ಜರಿದು, ರಸ್ತೆಗೆ ಬಿದ್ದು, ವಾಹನ ಸಂಚಾರ ಮತ್ತು ರಸ್ತೆಯಲ್ಲಿ ನಡೆದಾಡುವವರಿಗೆ ಅಪಾಯವನ್ನು ತಂದೊಡ್ಡಬಹುದು .

… ಈಗಾಗಲೇ ಮಳೆ ಪ್ರಾರಂಭವಾಗಿದ್ದು.. ರಸ್ತೆ ಸುರಕ್ಷತೆಯ ಬಗ್ಗೆ ಎಚ್ಚರಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ.
ಇಲಾಖೆ ಹಾಗೂ ಕಂಟ್ರಾಕ್ಟರ್ ದಾರರು ಕುರುಡು ನೀತಿ ತಳೆದರೆ ಸಾಣೂರು ಗ್ರಾಮಸ್ಥರಿಂದ ಪ್ರತಿಭಟನೆಗೆ ಎದುರಿಸಲು ಸಿದ್ದರಾಗಬೇಕಾದಿತ್ತೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸದಸ್ಯ ಸಾಣೂರು ನರಸಿಂಹ ಕಾಮತ್ ಪ್ರಕಟಣೆಯಲ್ಲಿ ಮೂಲಕ ತಿಳಿಸಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು