ಕುಂದಾಪುರ: ಕ್ಷೇತ್ರದ ಜನರು ಜಾತಿ.ಮತ,ಧರ್ಮವನ್ನು ಮರೆತು ಅಭೂತಪೂರ್ವ ಮತಗಳನ್ನು ನೀಡಿ ಐದು ಬಾರಿ ಶಾಸಕನಾಗಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಯಾವುದೋ ಒಂದು ಸಂದರ್ಭದಲ್ಲಿ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಮತಯಾಚನೆಗೂ ಕ್ಷೇತ್ರಕ್ಕೆ ಹೋಗದೆ ಮನೆಯಲ್ಲಿ ಇದ್ದರೂ ಅಧಿಕ ಮತಗಳ ಅಂತರದಿಂದ ತನ್ನ ಮೇಲೆ ವಿಶ್ವಾಸ ವಿಟ್ಟು ಮತವನ್ನು ಮತದಾರರು ನೀಡಿದ್ದಾರೆ ಎಂದು ಮತದಾರರ ಪ್ರೀತಿಯನ್ನು ನೆನೆದುಕೊಂಡ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕ್ಷೇತ್ರದ ಮತದಾರರಿಗೆ ಭಾವನಾತ್ಮಕ ರೀತಿಯಲ್ಲಿ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಮಂಗಳವಾರ ಹಾಲಾಡಿ ಅವರ ಗ್ರಹ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರರ್ತಕರ್ತರೊಂದಿಗೆ ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಾ ಅನುಭವನ್ನು ಹಂಚಿಕೊಂಡರು.
ಬರುವಾಗ ಎನ್ನನು ತರಲಿಲ್ಲ ಹೋಗುವಾಗ ಎನ್ನನ್ನು ತೆಗೆದುಕೊಂಡು ಹೋಗುವುದಿಲ್ಲ ನಿನ್ನೆ ಯಾರದ್ದೋ ಆಗಿತ್ತು ನಾಳೆ ಯಾರದ್ದೋ ಆಗುತ್ತದೆ ಪರಿವರ್ತನೆ ಎನ್ನುವುದು ಜಗದ ನಿಯಮ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ ಎಂದು ಭಗವದ್ಗೀತೆಯ ಸಾಲುಗಳನ್ನು ಉಚ್ಚರಿಸಿದರು.
ನನಗೆ ರಾಜಕೀಯ ಗುರು ಯಾರಿಲ್ಲ:
ನಾನು ರಾಜಕೀಯ ಗುರುವಿನಿಂದ ರಾಜಕೀಯಕ್ಕೆ ಬಂದವನು ಅಲ್ಲಾ ನನಗೆ ರಾಜಕೀಯ ಗುರು ಯಾರು ಇಲ್ಲಾ ಇದು ಸ್ಪಷ್ಟವಾದ ಅಭಿಪ್ರಾಯವಾಗಿದೆ ವಿದ್ಯಾರ್ಥಿ ಜೀವನದಲ್ಲಿಯೇ ಕಾಪು, ಬೈಂದೂರು, ಕುಂದಾಪುರ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುವುದರ ಮೂಲಕ ನಾನು ರಾಜಕೀಯ ಪ್ರವೇಶವನ್ನು ಕಂಡುಕೊಂಡಿದ್ದೇನೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸ ಬೇಕ್ಕೆನ್ನುವ ಅಭಿಪ್ರಾಯ ಬಂದರೆ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮವಹಿಸಲಾಗುವುದು ಎಂದು ಹೇಳಿದರು.
ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಯಾರಾಗಲು ಬಯಸುತ್ತಿರಿ ಎನ್ನುವ ಪರ್ತಕರ್ತರು ಕೇಳಿದ ಪ್ರಶ್ನೆಗೆ ಉಚ್ಚರಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನಾನು ಸಲಹೆ ಕೊಡುವಂತ ಜವಾಬ್ದಾರಿ ಹುದ್ದೆಯಲ್ಲಿ ಇಲ್ಲ,ನಿರ್ಧಾರ ಎನ್ನುವುದು ರಾಷ್ಟ್ರಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ಆಗುತ್ತದೆ ತಾನು ಯಾರ ಹೆಸರನ್ನೂ ಸೂಚಿಸುವುದಿಲ್ಲ ಎಂದರು.ನನ್ನ ತಂದೆಯವರ ಕಾಲದಿಂದಲೂ ಕೊಡ್ಗಿ ಅವರ ಕುಟುಂಬದವರೊಂದಿಗೆ ಅನ್ಯೋನ್ಯತೆ ರೀತಿಯಾದ ಸಂಬಂಧವಿದೆ ಕಿರಣ್ ಕೊಡ್ಗಿ ಅವರಿಗೆ ಕುಂದಾಪುರ ಕ್ಷೇತ್ರದ ಟಿಕೆಟ್ ಕೊಟ್ಟರೆ ಸಂತೋಷ ಪಡುತ್ತೇನೆ ಅವರಿಗೆ ಕೊಡಬೇಕು ಎನ್ನುವುದಕ್ಕೆ ನಾನು ರಾಜ್ಯಾಧ್ಯಕ್ಷನ್ನಲ್ಲ ಎಂದರು.
ಸ್ವಇಚ್ಚೆಯಿಂದ ಚುನಾವಣೆಗೆ ನಿಲ್ಲದಿರಲು ನಿರ್ಧರಿಸಿದ್ದೇನೆ ನನ್ನ ನಿರ್ಧಾರದಲ್ಲಿ ಬದಲಾವಣೆಗಳು ಇಲ್ಲಾ ಹಾಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸೂಚಿಸುವ ಮೊದಲೆ ಚುನಾವಣೆಯಲ್ಲಿ ನಿಲ್ಲದಿರು ನಿರ್ಧಾರ ತೆಗೆದುಕೊಂಡಿದ್ದೇನೆ ತನ್ನದು ಚಂಚಲ ಮನಸು ಅಲ್ಲಾ ಎಂದು ಚುನಾವಣೆಯಲ್ಲಿ ನಿಲ್ಲದಿರುವುದರ ಬಗ್ಗೆ ಸ್ಪಷ್ಟಪಡಿಸಿದರು.
ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿತನಾಗಿ ಇರುತ್ತೇನೆ.ಶಾಸಕನಾಗಿ ಇರದೆ ಇದ್ದರೂ ಜನರೊಂದಿಗೆ ಹೃದಯ ಪೂರ್ವಕನಾಗಿ ಇರುತ್ತೇನೆ ಎಂದರು.
ಪಕ್ಷದ ಹಿರಿಯ ನಾಯಕರುಗಳಾದ ದಿ.ಅನಂತ ಕುಮಾರ್ ಮತ್ತು ದಿ.ಅರುಣ್ ಜೆಟ್ಲಿ,ದಿ,ಮನೋಹರ್ ಪಾರಿಕರ್,ದಿ.ಸುಷ್ಮಾ ಸ್ವರಾಜ್ ಅವರನ್ನು ನೆನೆದುಕೊಂಡರು.
ಜೀವಕ್ಕೆ ಶ್ವಾಸ ಇರುವ ತನಕ ಶ್ವಾಸ ಕ್ರಿಯೆ ಮಾಡಲು ಪ್ರಯತ್ನಿಸಬೇಕು ಎಂದು ಮಾರ್ಮಿಕವಾಗಿ ನುಡಿದ ಅವರು ನಾನು ರಾಜಕಿಯ ನಿವೃತ್ತಿ ತೆಗದು ಕೊಳ್ಳುತ್ತೇನೆ ಎಂದು ಹೇಳಿರಲಿಲ್ಲ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದೇನೆ ಹೊರತು ರಾಜಕೀಯ ನಿವೃತಿಯನ್ನು ಘೋಷಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉಚ್ಚರಿಸಿದರು.
ಕುಂದಾಪುರ ಕ್ಷೇತ್ರಕ್ಕೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸಗಳು ನಡೆಯಲಿ, ಕೃಷಿಕರಿಗೆ ನೀರು ಕೊಡುವ ಬಗ್ಗೆ,ಬಡವರಿಗೆ ನ್ಯಾಯ ದೊರಕಿಸಿಕೊಡುವಂತ ಕೆಲಸಗಳು ನಡೆಯುವಂತೆ ಆಗಲಿ ಮುಂದೆ ಬರುವವರಿಗೆ ನಾನು ಸಹಕಾರ ನೀಡುತ್ತೇನೆ ಎಂದರು.