News Karnataka Kannada
Saturday, May 04 2024
ಉಡುಪಿ

ಮಣಿಪಾಲದ ಪಬ್ ಬಳಿ‌ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಗೆ ಚೂರಿಯಿಂದ ಹಲ್ಲೆ

Man attacked with knife over financial issue near pub in Manipal
Photo Credit : News Kannada

ಮಣಿಪಾಲ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪರಸ್ಪರ ಹೊಡೆದಾಡಿಕೊಂಡ ಘಟನೆ ಮಣಿಪಾಲದ ಲೇಕ್ ವಿವ್ಯೂ ಬಳಿ ನಡೆದಿದೆ.

ಕಾಡಬೆಟ್ಟು ನಿವಾಸಿ ಪ್ರಶಾಂತ್ ಎಂಬವರು ಡಿ.31 ರಂದು ಮಣಿಪಾಲ ಸಮೀಪದ ಪಬ್ ವೊಂದರಲ್ಲಿ ಇದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು, ಪಚ್ಚು ಎಂದರೆ ನೀನೆನಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಬ್ ನಿಂದ ಹೊರಗೆ ಬರುವಂತೆ ತಿಳಿಸಿದ್ದಾರೆ. ಅಲ್ಲಿಂದ ಹೊರಬಂದ ಪ್ರಶಾಂತ್ ಲೇಕ್ ವಿವ್ಯೂ ಕಡೆ ಹೋಗಿದ್ದು, ರತನ್ ಮತ್ತು ಇತರ ಇಬ್ಬರು ಹಿಂಬಾಲಿಸಿಕೊಂಡು ಬಂದು ಬೇಸ್ ಬ್ಯಾಟ್ ನಿಂದ ಹಲ್ಲೆ ಮಾಡಿದ್ದಾರೆ. ಓರ್ವ ಆರೋಪಿ ಮುಖಕ್ಕೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾನೆ.  ಜನ ಸೇರುತ್ತಿದ್ದಂತೆ ಆರೋಪಿಗಳು ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿ ಮಲ್ಪೆಯ ಕೊಡವೂರು ನಿವಾಸಿ ರತನ್ ಪ್ರತಿದೂರು ನೀಡಿದ್ದಾರೆ. ಅದರಂತೆ ಡಿ.31 ರಾತ್ರಿ ರತನ್ ಅವರು ಹಣ ಪಡೆಯಲು ಪರಿಚಯದ ಲೋಯ್ಡ್ ಅವರಿಗೆ ಕರೆ ಮಾಡಿದ್ದು, ಆತನ ಬದಲು ಪ್ರಶಾಂತ್ ಎಂಬಾತ ಕರೆ ಸ್ವೀಕರಿಸಿ ಹಣ ಪಡೆದುಕೊಳ್ಳಲು ಪಬ್ ಬಳಿ ಬರಲು ತಿಳಿಸಿದ್ದನು. ಅದರಂತೆ ರತನ್ ಅವರು ಪಬ್ ಬಳಿ ಹೋಗಿದ್ದಾರೆ. ಆಗ ಪ್ರಶಾಂತ ಯಾನೆ ಪಚ್ಚು ಹಣ ಕೊಡಲು ಆಗುವುದಿಲ್ಲ ಏನೂ ಮಾಡಿಕೊಳ್ಳುತ್ತಿಯಾ ಮಾಡಿಕೋ ಎಂದು ಹೇಳಿ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು