News Karnataka Kannada
Thursday, May 02 2024
ಉಡುಪಿ

ಅಪಾಯ ಆಹ್ವಾನಿಸುತ್ತಿದ್ದ ಹೊಂಡ ಮುಚ್ಚಿ ಸಾಮಾಜಿಕ ಬದ್ಧತೆ ಮೆರೆದ ಲಾಡ್ಜ್ ಮಾಲೀಕ

Lodge owner closes pit inviting danger, shows social commitment
Photo Credit : News Kannada

ಉಡುಪಿ: ನಗರದ ಸರ್ವೀಸ್ ಬಸ್ ನಿಲ್ದಾಣದ ಬಳಿಕ ಬೃಂದಾವನ ಲಾಡ್ಜ್ ಎದುರು ಒಳ ಚರಂಡಿ ಕುಸಿದು ಹೊಂಡವಾಗಿ ಮಾರ್ಪಟಿತ್ತು. ಇದನ್ನು ಗಮನಿಸಿದ ಬೃಂದಾವನ ಕಟ್ಟಡದ ಮಾಲೀಕರಾದ ಹುಸೇನ್ ಶಿರಿಸಿ ಅವರು ತಾವೇ ಮುಂದೆ ನಿಂತು ಒಳಚರಂಡಿ ಕಾಮಗಾರಿ ನಡೆಸಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.

ಬೃಂದಾವನ್ ಹೊಟೇಲ್ ಎದುರು ಒಳಚರಂಡಿ ದಿನದಿಂದ ದಿನಕ್ಕೆ ಕುಸಿಯುತ್ತಾ ಬೃಹತ್ ಹೊಂಡ ನಿರ್ಮಾಣವಾಗಿತ್ತು. ಮಾತ್ರವಲ್ಲದೇ ಇಂಟರ್ ಲಾಕ್ ಗಳು ಹೊಂಡದ ಒಡಲು ಸೇರಿತ್ತು. ಹಲವು ವಾಹನಗಳು ಅಲ್ಲೇ ಪಾರ್ಕ್ ಮಾಡುತ್ತಿದ್ದರಿಂದ ದೊಡ್ಡ ಅನಾಹುತವೊಂದು ಕಾದಿತ್ತು.

ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮುಂದೆ ಆಗಬಹುದಾದ ಅಪಾಯ ಅರಿತು ಹುಸೇನ್ ಅವರೇ ಮುಂದೆ ನಿಂತು ಕಾಮಗಾರಿ ನಡೆಸಿದ್ದಾರೆ. ಇಬ್ಬರು ಕಾರ್ಮಿಕರು ಕಳೆದ ಎರಡು ದಿನಗಳಿಂದ ಇಲ್ಲಿ ಕೆಲಸ ನಿರ್ವಹಿಸಿದ್ದು ಇದೀಗ ಸಂಪೂರ್ಣವಾಗಿ ಹೊಂಡವನ್ನು ಮುಚ್ಚಲಾಗಿದೆ. ಹುಸೇನ್ ಆವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು