ಉಡುಪಿ: ನಗರದ ಸರ್ವೀಸ್ ಬಸ್ ನಿಲ್ದಾಣದ ಬಳಿಕ ಬೃಂದಾವನ ಲಾಡ್ಜ್ ಎದುರು ಒಳ ಚರಂಡಿ ಕುಸಿದು ಹೊಂಡವಾಗಿ ಮಾರ್ಪಟಿತ್ತು. ಇದನ್ನು ಗಮನಿಸಿದ ಬೃಂದಾವನ ಕಟ್ಟಡದ ಮಾಲೀಕರಾದ ಹುಸೇನ್ ಶಿರಿಸಿ ಅವರು ತಾವೇ ಮುಂದೆ ನಿಂತು ಒಳಚರಂಡಿ ಕಾಮಗಾರಿ ನಡೆಸಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.
ಬೃಂದಾವನ್ ಹೊಟೇಲ್ ಎದುರು ಒಳಚರಂಡಿ ದಿನದಿಂದ ದಿನಕ್ಕೆ ಕುಸಿಯುತ್ತಾ ಬೃಹತ್ ಹೊಂಡ ನಿರ್ಮಾಣವಾಗಿತ್ತು. ಮಾತ್ರವಲ್ಲದೇ ಇಂಟರ್ ಲಾಕ್ ಗಳು ಹೊಂಡದ ಒಡಲು ಸೇರಿತ್ತು. ಹಲವು ವಾಹನಗಳು ಅಲ್ಲೇ ಪಾರ್ಕ್ ಮಾಡುತ್ತಿದ್ದರಿಂದ ದೊಡ್ಡ ಅನಾಹುತವೊಂದು ಕಾದಿತ್ತು.
ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮುಂದೆ ಆಗಬಹುದಾದ ಅಪಾಯ ಅರಿತು ಹುಸೇನ್ ಅವರೇ ಮುಂದೆ ನಿಂತು ಕಾಮಗಾರಿ ನಡೆಸಿದ್ದಾರೆ. ಇಬ್ಬರು ಕಾರ್ಮಿಕರು ಕಳೆದ ಎರಡು ದಿನಗಳಿಂದ ಇಲ್ಲಿ ಕೆಲಸ ನಿರ್ವಹಿಸಿದ್ದು ಇದೀಗ ಸಂಪೂರ್ಣವಾಗಿ ಹೊಂಡವನ್ನು ಮುಚ್ಚಲಾಗಿದೆ. ಹುಸೇನ್ ಆವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.