News Karnataka Kannada
Monday, May 06 2024
ಉಡುಪಿ

ಕುಂದಾಪುರ: ಸಮುದ್ರ ರಾಜನಿಗೆ ಸಮುದ್ರ ಆರತಿ ಪೂಜೆ

Kundapur: Worship to the king of the sea
Photo Credit : News Kannada

ಕುಂದಾಪುರ: ಕಳೆದರಡು ವರ್ಷಗಳಿಂದ ಮರವಂತೆ ಕಡಲ ತೀರದಲ್ಲಿ ಸಮುದ್ರ ರಾಜನ ಆರ್ಭಟದಿಂದ ಕಡಲ್ಕೊರೆತ ಉಂಟಾಗಿ ಮೀನುಗಾರರಿಗೆ ಸಾಕಷ್ಟು ಕಷ್ಟ ನಷ್ಟ ಉಂಟಾಗಿದ್ದರಿಂದ ಮೀನುಗಾರರು ಸಮುದ್ರ ರಾಜನಲ್ಲಿ ಬೇಡಿಕೊಂಡು ಪ್ರಾರ್ಥಿಸಿದಂತೆ ಸಮುದ್ರ ರಾಜನಿಗೆ ಸಮುದ್ರ ಆರತಿ ಪೂಜೆಯನ್ನು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೋಧೂಳಿ ಲಗ್ನ ಸಮುಹೂರ್ತ ಬಧುವಾರ ಮಾಡಲಾಯಿತು.

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಮುದ್ರ ರಾಜನಿಗೆ ಸಮುದ್ರ ಪೂಜೆ ನೆರವೇರಿಸಿದರು,ಮಾತೆಯರು ಹೂ, ನಾಣ್ಯ, ಅರಿಶಿನ, ಕುಂಕುಮವನ್ನು ಗಂಗೆಗೆ ಸಮರ್ಪಿಸಿ ಸಾಮೂಹಿಕವಾಗಿ ಆರತಿಯನ್ನು ಬೆಳಗಿದರು.

ಮರವಂತೆ ಕರಾವಳಿ ಶಾಲೆಯಿಂದ ಶ್ರೀರಾಮ ಮಂದಿರದ ವರೆಗೆ ಶ್ರೀ ರಾಘವೇಶ್ವರ ಸ್ವಾಮೀಜಿಗಳನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.ದೇವರ ಸನ್ನಿಧಾನಕ್ಕೆ ಆಗಮಿಸಿದ ಶ್ರೀಗಳು ಶ್ರೀರಾಮ ದೇವರಿಗೆ ಸುವರ್ಣ ಕೀರಿಟ ಮತ್ತು ಕವಚ ಧಾರಣೆ ಮಾಡಿದರು.ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಮರವಂತೆ,ಮೀನುಗಾರರ ಸೇವಾ ಸಮಿತಿ ಅಧ್ಯಕ್ಷರು,ಸದಸ್ಯರು ಮತ್ತು ರಜತ ಮಹೋತ್ಸವ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು