ಕುಂದಾಪುರ: ಕಳೆದರಡು ವರ್ಷಗಳಿಂದ ಮರವಂತೆ ಕಡಲ ತೀರದಲ್ಲಿ ಸಮುದ್ರ ರಾಜನ ಆರ್ಭಟದಿಂದ ಕಡಲ್ಕೊರೆತ ಉಂಟಾಗಿ ಮೀನುಗಾರರಿಗೆ ಸಾಕಷ್ಟು ಕಷ್ಟ ನಷ್ಟ ಉಂಟಾಗಿದ್ದರಿಂದ ಮೀನುಗಾರರು ಸಮುದ್ರ ರಾಜನಲ್ಲಿ ಬೇಡಿಕೊಂಡು ಪ್ರಾರ್ಥಿಸಿದಂತೆ ಸಮುದ್ರ ರಾಜನಿಗೆ ಸಮುದ್ರ ಆರತಿ ಪೂಜೆಯನ್ನು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೋಧೂಳಿ ಲಗ್ನ ಸಮುಹೂರ್ತ ಬಧುವಾರ ಮಾಡಲಾಯಿತು.
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಮುದ್ರ ರಾಜನಿಗೆ ಸಮುದ್ರ ಪೂಜೆ ನೆರವೇರಿಸಿದರು,ಮಾತೆಯರು ಹೂ, ನಾಣ್ಯ, ಅರಿಶಿನ, ಕುಂಕುಮವನ್ನು ಗಂಗೆಗೆ ಸಮರ್ಪಿಸಿ ಸಾಮೂಹಿಕವಾಗಿ ಆರತಿಯನ್ನು ಬೆಳಗಿದರು.
ಮರವಂತೆ ಕರಾವಳಿ ಶಾಲೆಯಿಂದ ಶ್ರೀರಾಮ ಮಂದಿರದ ವರೆಗೆ ಶ್ರೀ ರಾಘವೇಶ್ವರ ಸ್ವಾಮೀಜಿಗಳನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.ದೇವರ ಸನ್ನಿಧಾನಕ್ಕೆ ಆಗಮಿಸಿದ ಶ್ರೀಗಳು ಶ್ರೀರಾಮ ದೇವರಿಗೆ ಸುವರ್ಣ ಕೀರಿಟ ಮತ್ತು ಕವಚ ಧಾರಣೆ ಮಾಡಿದರು.ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಮರವಂತೆ,ಮೀನುಗಾರರ ಸೇವಾ ಸಮಿತಿ ಅಧ್ಯಕ್ಷರು,ಸದಸ್ಯರು ಮತ್ತು ರಜತ ಮಹೋತ್ಸವ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.