ಕುಂದಾಪುರ: ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದಾಪುರ ಸಮೀಪದ ಬಳುವಳ್ಳಿಯ ನಿವಾಸಿ ಬಡ ಕುಟುಂಬದ ಸದಸ್ಯರಾದ ಸುರಕ್ಷ ಅವರ ವೈದ್ಯಕೀಯ ಚಿಕಿತ್ಸೆಗೆ ಸಹೃದಯಿ ಮನಸ್ಸುಗಳ ಸಹಾಯಹಸ್ತ ಬೇಕಾಗಿದೆ.
ಬಡ ಕುಟುಂಬದಲ್ಲಿ ಜನಿಸಿದ್ದ ಸುರಕ್ಷ ಅವರು ದ್ವಿತೀಯ ಪಿಯುಸಿ ಶಿಕ್ಷಣವನ್ನು ಮುಗಿಸಿ ಬ್ಯಾಂಕ್ನಲ್ಲಿ ಶೈಕ್ಷಣಿಕ ಸಾಲ ಮಾಡಿ ಕಟಪಾಡಿಯಲ್ಲಿ ಎಂಜಿನಿಯರ್ಗೆ ಶಿಕ್ಷಣಕ್ಕೆ ಸೇರಿರುತ್ತಾರೆ.ಅತ್ಯಂತ ಚುರುಕು ತನದಿಂದ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದ ಸುರಕ್ಷ ಅವರ ಆರೋಗ್ಯದಲ್ಲಿ ಹಠಾತ್ ಏರಿಳಿತಗೊಂಡಿದ್ದು ಅವರ ಮುಖ ಕೈ ಕಾಲಲ್ಲಿ ನೀರು ತುಂಬಿ ಕೊಂಡು ಆರೋಗ್ಯದ ಸ್ಥಿತಿ ಬಿಗಡಾಯಿಸಿದ್ದರಿಂದ ಕುಂದಾಪುರದಲ್ಲಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದಾರೆ.
ಸುರಕ್ಷ ಅವರ ಆರೋಗ್ಯದಲ್ಲಿ ಬದಲಾವಣೆಗಳು ಕಂಡು ಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ, ಸುರಕ್ಷ ಅವರನ್ನು ತಪಾಸಣೆ ನಡೆಸಿದ ವೈದ್ಯರು ಕಿಡ್ನಿ ಹಾಗೂ ಲಿವರ್ ಸಮಸ್ಯೆ ಇರುವುದಾಗಿ ತಿಳಿಸುತ್ತಾರೆ.
ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಲಾಗುತ್ತಿದ್ದು 10 ಸಾವಿರ ರೂ. ಖರ್ಚು ತಗಲುತ್ತಿ.ಅನಾರೋಗ್ಯದಿಂದ ಬಳಲುತ್ತಿರುವ ಮಗನ ಜೀವ ರಕ್ಷಣೆಗೆ ಹೆತ್ತವರು ಕಿಡ್ನಿ ದಾನ ಮಾಡಲು ಮುಂದಾಗಿದ್ದು ಕಿಡ್ನಿ ಜೋಡಣೆ ಚಿಕಿತ್ಸೆಗೆ 20 ಲಕ್ಷ ರೂ. ತಗಲುದೆಂದು ವೈದ್ಯರು ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಮಗನ ಚಿಕಿತ್ಸೆಗೆ ಹಣವನ್ನು ಹೊಂದಿಸಲು ಸಾಧ್ಯವಾಗದೆ ಬಡ ಕುಟುಂಬ ಕಂಗಾಲಾಗಿ ಹೋಗಿದೆ ಸಮಾನ ಮನಸ್ಕ ಸಮಾಜ ಬಾಂಧವರು ಸುರಕ್ಷ ಅವರ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಮಾಡಬಹುದಾಗಿದೆ.
ಬ್ಯಾಂಕ್ ಖಾತೆಯ ವಿವರ
ಹೆಸರು -ಸುರಕ್ಷ
ಖಾತೆ ಸಂಖ್ಯೆ- 6147101006035
ಐಎಫ್ಎಸ್ಸಿ ಕೋಡ್ -ಸಿಎನ್ಆರ್ ಬಿ0006147
ಶಾಖೆ-ಸಿದ್ದಾಪುರ ಗೂಗಲ್ ಪೆ ನಂಬರ್ – 9108310732