ಕುಂದಾಪುರ: ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ 12 ಕೋಟಿ.ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಜೆಟ್ಟಿಯು ಕುಸಿತಗೊಂಡಿದ್ದ ಪರಿಣಾಮದಿಂದ ಕೋಟ್ಯಾಂತರ.ರೂ ಸಮುದ್ರ ಪಾಲಾಗಿದೆ ಅಧಿಕಾರಿಗಳ ನಿರ್ಲಕ್ಷ್ಯ ತನದ ಕೆಲಸದಿಂದ ಮೀನುಗಾರರು ಕಂಗಾಲಾಗಿ ಹೋಗಿದ್ದಾರೆ.
ಉತ್ತಮ ಮೀನುಗಾರಿಕಾ ಋತು ಪ್ರಾರಂಭವಾದ ಹೊತ್ತಿನಲ್ಲಿ ಗಂಗೊಳ್ಳಿ ಬಂದರಿನಲ್ಲಿ ಜೆಟ್ಟಿ ಕುಸಿತದಿಂದ ಬೋಟುಗಳ ನಿಲುಗಡೆಗೆ ಜಾಗದ ಕೊರತೆ ಎದುರಾಗಿದೆ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಡಿದ ಮೀನುಗಳನ್ನು ಗಂಗೊಳ್ಳಿ ಬಂದರಿಗೆ ತರಲು ಸಾಧ್ಯವಾಗದೆ ದೂರದ ಭಟ್ಕಳ, ತೆಂಗಿನ ಗುಂಡಿ,ಅಳ್ವೆಗದ್ದೆ ಬಂದರಿನಲ್ಲಿ ಮೀನನ್ನು ಕಾಲಿ ಮಾಡಿದ್ದಾರೆ. ಮೀನಿನ ದರ ಇಳಿಮುಖವಾದ ಕಾರಣ ಸಾಗಾಟದ ವೆಚ್ಚದ ಹೊರೆ ಅಧಿಕವಾಗಿದ್ದು ಮೀನುಗಾರರು ನಷ್ಟ ಪಡುವಂತೆ ಆಗಿದೆ ಗಂಗೊಳ್ಳಿ ಬಂದರಿನಲ್ಲಿ ಬೋಟ್ಗಳು ಲ್ಯಾಂಡ್ ಆಗದ ಕಾರಣ ದಿನ ಕೂಲಿ ಮಹಿಳಾ ಮೀನುಗಾರ ಕಾರ್ಮಿಕರ ಹೊಟ್ಟೆಗೆ ಪೆಟ್ಟು ಬಿದ್ದಿದೆ.
ಅಸಮರ್ಪಕ ಕಾಮಗಾರಿ ಯಿಂದ ಬಂದರು ಕೆಲಸಕ್ಕೆ ಕುತ್ತು: 12 ಕೋಟಿಗೂ ಅಧಿಕ ವೆಚ್ಚದಲ್ಲಿ ಗಂಗೊಳ್ಳಿ ಬಂದರಿನಲ್ಲಿ ನಡೆಯುತ್ತಿರುವ ಜೆಟ್ಟಿ ಕೆಲಸದ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರರ ಫಲದಿಂದ ಜೆಟ್ಟಿ ನೀರು ಪಾಲಾಗಿದೆ ಎಂದು ಮೀನುಗಾರರು ದೂರಿದ್ದಾರೆ.ಹಳೆ ಜೆಟ್ಟಿಯನ್ನು ವೈಬ್ರೇಟ್ ಹಾಕಿ ರಾಡ್ ಕಟ್ಟ್ ಮಾಡಿದ ಕಾರಣದಿಂದ ಹಳೆ ಜೆಟ್ಟಿ ಕುಸಿದು ಹೊಸ ಫಿಲ್ಲರ್ ಮೇಲೆ ಮುಗುಚಿ ಬಿದ್ದ ಕಾರಣ 42 ಕ್ಕೂ ಹೆಚ್ಚಿನ ಫಿಲ್ಲರ್ ಮುರಿದು ನೀರಿನಲ್ಲಿ ಬಿದ್ದಿದೆ.
ಟನ್ಗಟ್ಟಲೆ ಕಬ್ಬಿಣ ನೀರಿನಲ್ಲಿ ರಾಶಿ: ಗಂಗೊಳ್ಳಿ ಬಂದರಿನಲ್ಲಿ ಹೊಸ ಜೆಟ್ಟಿ ಫಿಲ್ಲರ್ ಮುರಿದು ಬಿದ್ದ ಕಾರಣ ಟನ್ ಗಟ್ಟಲೆ ಕಬ್ಬಿಣ ನೀರಿನಲ್ಲಿ ರಾಶಿ ಆಗಿ ಬಿದ್ದಿದೆ ಇದು ಬೋಟ್ಗಳ ಸಂಚಾರಕ್ಕೆ ಅಪಾಯವನ್ನು ತಂದೊಡ್ಡಿದ್ದು ನೀರಿನಲ್ಲಿ ಹುದುಗಿರುವ ಕಬ್ಬಿಣ ಮತ್ತು ಸಿಮೆಂಟ್ ಫಿಲ್ಲರ್ಗಳನ್ನು ಮೇಲಕ್ಕೆತ್ತಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.
ಮೀನುಗಾರಿಕೆ ಆಫೀಸ್ ಕುಸಿತದ ಭೀತಿ: ಜೆಟ್ಟಿ ಕುಸಿತದ ಭಾಗಕ್ಕೂ ಮೀನಿಗಾರಿಕಾ ಆಫೀಸ್ಗೆ ಕೆಲವೆ ಕೆಲವು ಮೀಟರ್ ನಷ್ಟು ಅಂತರವಿದ್ದು ಯಾವುದೆ ಕ್ಷಣದಲ್ಲಾದರೂ ಮೀನುಗಾರಿಕಾ ಆಫೀಸ್ ಕುಸಿದು ಬೀಳುವ ಆತಂಕ ಎದುರಾಗಿದೆ.
12 ಕೋಟಿ ರೂ ವೆಚ್ಚದಲ್ಲಿ ಗಂಗೊಳ್ಳಿ ಬಂದರಿನಲ್ಲಿ 400 ಮೀಟರ್ ವರಗೆ ಹೊಸ ಜೆಟ್ಟಿ ಕಾಮಗಾರಿಯನ್ನು ನಡೆಸಲು ನೀಲಿ ನಕಾಶೆಯನ್ನು ತಯಾರಿಸಲಾಗಿದೆ.30% ಕೆಲಸ ಮಾತ್ರ ಆಗಿದ್ದು 70% ಕೆಲಸ ಇನ್ನೂ ಬಾಕಿ ಇದೆ ಹೀರುವಾಗ ಈಗಾಗಲೆ 10.6 ಕೋಟಿ.ರೂ ಹಣ ಬಿಡುಗಡೆ ಆಗಿದೆ ಇನ್ನುಳಿದ 70% ಕೆಲಸಕ್ಕೆ ಹಣ ಎಲ್ಲಿಂದ ಒದಗಿಸಲಾಗುತ್ತದೆ ಎನ್ನುವುದೆ ಪ್ರಶ್ನೆ ಆಗಿದೆ ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು.
-ಬಸವ ಖಾರ್ವಿ,ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ
ಗಂಗೊಳ್ಳಿ ಬಂದರಿನಲ್ಲಿ ಅವೈಜ್ಞಾನಿಕ ಮತ್ತು ಅಸಮರ್ಪಕ ಕಾಮಗಾರಿ ಕೆಲಸದಿಂದ ಕೋಟಿಗಟ್ಟಲೆ ಹಣ ನೀರುಪಾಲಾಗಿದೆ ಇದರ ಬಗ್ಗೆ ವೈಜ್ಞಾನಿಕ ಕಾರಣವನ್ನು ಕಲೆ ಹಾಕಬೇಕು.ಬಂದರು ಕೆಲಸದ ಅನುಭವ ವಿಲ್ಲದ ಕಂಪೆನೆಗೆ ಕೆಲಸ ನೀಡಿದ್ದರಿಂದ ಸಾರ್ವಜನಿಕ ಹಣ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.
-ಸದಾಶಿವ ಖಾರ್ವಿ,ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ