ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ಲಾಡಿ ಸಮೀಪ ರೈಲ್ವೆ ಹಳಿಯ ಪಕ್ಕದ ಗಿಡಗಂಟಿಗಳ ನಡುವೆ ಅಪರಿಚಿತ ಯುವಕನ ಶವ ಪತ್ತೆ ಆದ ಘಟನೆ ಶನಿವಾರ ನಡೆದಿದೆ.
ಗಂಗೊಳ್ಳಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು. 24*7 ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಅವರು ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು ನೆರವಾದರು. ಕೃಷ್ಣ,ಕಿಟ್ಟಿ,ನದೀಮ್, ಸಫ್ವಾನ್, ಸತೀಶ್ ದೇವಾಡಿಗ ಕೋಟಿ ಸಹಕರಿಸಿದರು. ಧೃಡಕಾಯ ಶರೀರವನ್ನು ಹೊಂದಿರುವ ಯುವಕನ ಮೃತ ಶವ ಕೊಳೆತು ಹೋಗಿದ್ದು ದುರ್ನಾತ ಬೀರುತ್ತಿತ್ತು.