ಕುಂದಾಪುರ: ಕೋವಿಡ್ ಸಮಯದಲ್ಲಿ ತಂದೆಯ ಅಕಾಲಿಕ ನಿಧನದಿಂದ ಕಂಗೆಟ್ಟಿದ್ದ ಕುಟುಂಬ ಸಂಕಷ್ಟವನ್ನು ಮೆಟ್ಟಿ ನಿಂತು ತಾಯಿಯ ಸಹಕಾರದಿಂದ ಯಾವುದೇ ರೀತಿಯ ಟ್ಯೂಷನ್ ಪಡೆಯದೇ ಛಲದಿಂದ ಹಗಲಿರುಳು ಓದಿ ದ್ವಿತೀಯ
ಪಿಯುಸಿ ಪರೀಕ್ಷೆಯಲ್ಲಿ ವೆಂಕಟರಮಣ ಕಾಲೇಜು ಕುಂದಾಪುರ ವಿದ್ಯಾರ್ಥಿಗಳಾದ ರಕ್ಷಿತಾ ಹಾಗೂ ಐಶ್ವರ್ಯ ಎನ್ನುವ ಸಹೋದರಿಯರು ಕ್ರಮವಾಗಿ 98% & 95% ಅಂಕ ಪಡೆಯುವ ಮೂಲಕ ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ ಜಿ ಫೌಂಡೇಶನ್ ಮುಖ್ಯಸ್ಥರಾದ ನಾಗರಾಜ ದೇವಾಡಿಗ ಪಡುಕೋಣೆ ಸಹಾಯವನ್ನು ಮಾಡಿದ್ದಾರೆ.