ಕುಂದಾಪುರ: ಮಹಿಳೆ ದೇಶದ ಸಂಪತ್ತು,ಪ್ರತಿ ಹಂತದಲ್ಲಿಯೂ ಮಹಿಳೆಗೆ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ, ಮಹಿಳಾ ಸಬಲೀಕರಣದ ಕನಸು ನನಸಾದರೆ ಮಾತ್ರ ದೇಶ ಅಭಿವೃದ್ಧಿಗೊಳ್ಳಲಿದೆ ಎಂದು ತರಬೇತಿ ಸಹಾಯಕರಾದ ಕವಿತಾ ಗಾಣಿಗ ಹೇಳಿದರು.
ಜಿಲ್ಲಾ ಪಂಚಾಯತ್ ಉಡುಪಿ,ತಾಲೂಕು ಪಂಚಾಯತ್ ಕುಂದಾಪುರ,ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಹೊಸಾಡು ಅವರ ಸಹಯೋಗದಲ್ಲಿ ಹೊಸಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ರಾಮ ಮಟ್ಟದ ಲಿಂಗತ್ವಧಾರಿತ ದೌರ್ಜನ್ಯ ನಿವಾರಣೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಕುಂದಾಪುರ ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಎಫ್ಎಲ್ಸಿಆರ್ಪಿ ಸಿತಾರ ಅವರು ಸಂಜೀವಿನಿ ಸಂಘದ ವ್ಯವಹಾರ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು, ಹೊಸಾಡು ಗಣೇಶ್ ಸೊಸೈಟಿ ಸಲಹೆಗಾರ ವಿಶ್ವಂಭರ ಐತಾಳ್ ಬ್ಯಾಂಕಿಂಗ್ ಸೌಲಭ್ಯದ ಕುರಿತು ವಿವರಿಸಿದರು.
ಸಂಜೀವಿನಿ ಒಕ್ಕೂಟದ ತಾಲೂಕು ಕಾರ್ಯದರ್ಶಿ ಪ್ರೇಮ ಶೆಟ್ಟಿ,ಹೊಸಾಡು ಒಕ್ಕೂಟದ ಅಧ್ಯಕ್ಷೆ ವಂದನಾ ಖಾರ್ವಿ, ಎಲ್ಸಿಆರ್ಪಿ, ಎಂಬಿಕೆ ಮತ್ತು ಸವಿತಾ ಭಂಡಾರಿ, ವಸಂತಿ ದೇವಾಡಿಗ, ಚೈತ್ರಾ ಉಪಸ್ಥಿತರಿದ್ದರು.