ಕುಂದಾಪುರ: ಆರೋಗ್ಯದ ದೃಷ್ಟಿಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಉತ್ತಮ ಆಹಾರ ಸೇವನೆ ಸಮಯಕ್ಕೆ ಸರಿಯಾಗಿ ನಿದ್ದೆ, ದೈಹಿಕ ಶ್ರಮ, ಬಾಹ್ಯ ಸ್ವಚ್ಛತೆಯ ಜೊತೆಗೆ ಸರಿಯಾದ ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳುವುದು ಮುಖ್ಯ ಎಂದು ಆದರ್ಶ ಹಾಸ್ಪಿಟಲ್ ಡಾಕ್ಟರ್ ಸಂದೀಪ್ ಶೆಟ್ಟಿ ಹೇಳಿದರು.
ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಭವನದಲ್ಲಿ ನಡೆದ ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಆದರ್ಶ ಹಾಸ್ಪಿಟಲ್ ಆಸ್ಪತ್ರೆ ಉಡುಪಿ ಅವರ ಜಂಟಿ ಆಶ್ರಯದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಚರ್ಮರೋಗ ತಜ್ಞರಾದ ಡಾ.ಅರುಣ್ ಕುಮಾರ್ ಶೆಟ್ಟಿ, ಸ್ತ್ರೀ ರೋಗ ತಜ್ಞೆ ದಮಯಂತಿ,ಡಾಕ್ಟರ್ ಸಂದೀಪ್ ಶೆಟ್ಟಿ ಹಾಗೂ ಡಾಕ್ಟರ್ ನಾರಾಯಣ್ ಶೆಟ್ಟಿ ಆರೋಗ್ಯ ಮಾಹಿತಿಯನ್ನು ನೀಡಿದರು.
ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷೆ ಸುಗುಣ ಆರ್ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ರೋ ವಾಸುದೇವ್ ಶೇರುಗಾರ್,ನಾರಾಯಣ ಇ ನಾಯ್ಕ್,ಕಮ್ಯುನಿಟಿ ಸರ್ವಿಸ್ ಚೇರ್ಮನ್ ರೋ ರಾಮನಾಥ್ ನಾಯಕ್,ಕ್ಲಬ್ಬಿನ ಕಾರ್ಯದರ್ಶಿ ಚಂದ್ರಕಲಾ ತಾಂಡಲ್, ಜನಾರ್ದನ್ ಪೆರಾಜೆ,ಪ್ರದೀಪ್ ಡಿ ಕೆ,ಲಕ್ಷ್ಮಿಕಾಂತ್ ಮಡಿವಾಳ, ನಾಗೇಂದ್ರ ಪೈ,ಮಾಲಾಶ್ರೀ, ಶಿವಾನಂದ್ ಪೂಜಾರಿ, ರೋಕೃಷ್ಣ ಪೂಜಾರಿ, ಉಪಸ್ಥಿತರಿದ್ದರು.