ಕುಂದಾಪುರ: ಬ್ರಹ್ಮವಾರ ತಾಲೂಕಿನ ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾಲು ಜೆಡ್ಡು ಪರಿಸರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕ್ಕೆನ್ನುವ ಸಾರ್ವಜನಿಕರ ಮನವಿಗೆ ಇಲ್ಲಿ ತನಕ ಸರಕಾರ ಸ್ಪಂದಿಸಿಲ್ಲ.
ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾಲು ರಸ್ತೆಯನ್ನು ಸುಸಜ್ಜಿತವಾದ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯರು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಘುಪತಿ ಭಟ್ ಅವರಿಗೆ ಮನವಿಯನ್ನು ಸಲ್ಲಿಸಿದ್ದರು.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ ಆಗಿದ್ದರು,ರಸ್ತೆ ಅಭಿವೃದ್ಧಿ ಕೆಲಸ ಸಂಪೂರ್ಣವಾಗಿ ನಡೆದಿಲ್ಲ 500 ಮೀಟರ್ ವರಗೆ ಜೆಲ್ಲಿ ಕಲ್ಲುಗಳನ್ನು ರಸ್ತೆಗೆ ಹಾಕಲಾಗಿದೆ ಎಂದು ಸ್ಥಳೀಯ ವ್ಯಕ್ತಿಗಳು ದೂರಿದ್ದಾರೆ.
ಜೆಲ್ಲಿಕಲ್ಲುಗಳನ್ನು ರಾಶಿ ಹಾಕಿದ ರಸ್ತೆಯಲ್ಲಿ ಹಿರಿಯ ನಾಗರೀಕರು,ವಿದ್ಯಾರ್ಥಿಗಳಿಗೆ,ವಾಹನದ ಸವಾರರಿಗೆ ಸಂಚರಿಸುವುದೆ ಕಷ್ಟವಾಗಿದೆ.ಕುಂಜಾಲು ರಸ್ತೆ ಅಭಿವೃದ್ಧಿಗೊಂಡರೆ ಪರಿಸರದ 12 ಕುಟುಂಬಗಳಿಗೆ ಪ್ರಯೋಜನವಾಗಲಿದೆ.ಆದಷ್ಟು ಬೇಗನೆ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕ್ಕೆನ್ನುವುದು ಸ್ಥಳೀಯರ ಬೇಡಿಕೆ ಆಗಿದೆ.