News Karnataka Kannada
Friday, May 17 2024
ಉಡುಪಿ

ಕುಂದಾಪುರ: ಚರ್ಮ ಗಂಟು ರೋಗಗಕ್ಕೆ ಜಾನುವಾರುಗಳು ತತ್ತರ

Kundapur: Cattle suffering from skin nodule disease
Photo Credit : News Kannada

ಕುಂದಾಪುರ: ಸತತ ಎರಡು ವರ್ಷಗಳಿಂದ ನಿರಂತರವಾಗಿ ಕಾಡುತ್ತಿರುವ ಚರ್ಮ ಗಂಟು ರೋಗದಿಂದ ಜಾನುವಾರುಗಳು ತತ್ತರಿಸಿ ಹೋಗಿವೆ. ಕಾಯಿಲೆಯ ತೀವೃತೆಯಿಂದ ಬಳಲುತ್ತಿರುವ ದನ ಕರುಗಳು ಮುಖ ರೋಧನೆಯಿಂದ ಕೊಟ್ಟಿಗೆಯಲ್ಲಿ ಕಣ್ಣೀರನ್ನು ಸುರಿಸುತ್ತಿವೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತ ಮಹಿಳೆಯರನ್ನು ಚಿಂತೆಗೀಡು ಮಾಡಿದೆ.

ಕರ್ನಾಟಕ ರಾಜ್ಯದಲ್ಲಿ ಕಳದೆರಡು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗಕ್ಕೆ ಇಲ್ಲಿ ತನಕ ಸೂಕ್ತವಾದ ಲಸಿಕೆ ಆಗಲಿ ಔಷಧವಾಗಲಿ ದೊರೆತ್ತಿಲ್ಲ.

ಗೋಮಾತೆ ರಕ್ಷಣೆಗೆ ರಾಜ್ಯ ಸರಕಾರ ಸಹಾಯವಾಣಿ ಸೇರಿದಂತೆ ಗೋವಿನ ಶ್ರುಶೂಷೆಗಾಗಿ ಪಶು ಸಂಜೀವಿನಿ ಯೋಜನೆಯಡಿಯಲ್ಲಿ ಆಂಬ್ಯುಲೆನ್ಸ್ ನಂತ ಜನಪ್ರೀಯ ಯೋಜನೆಗಳನ್ನು ಜಾರಿಗೆ ತಂದಿದ್ದರು ಜಾನುವಾರುಗಳಿಗೆ ತಗಲುತ್ತಿರುವ ಚರ್ಮ ಗಂಟು ರೋಗವನ್ನು ಹತೋಟಿಗೆ ತರಲು ವಿಫಲವಾಗಿದೆ.

ಹಸುಗಳನ್ನು ಕಾಡುತ್ತಿರುವ ಚರ್ಮ ಗಂಟು ರೋಗದ ಲಕ್ಷಣಗಳೆ ಭಯಾನಕವಾಗಿದೆ ಇದೊಂದು ರೀತಿಯ ಸಾಂಕ್ರಮಿಕ ರೋಗ ಇದ್ದಂತೆ ಕಳದೆರಡು ವರ್ಷಗಳಿಂದ ಹತೋಟಿಗೆ ಬಂದಿಲ್ಲ.ಒಂದು ವರ್ಷದ ಅವಧಿಯೊಳಗೆ ಎರಡೆರಡು ಬಾರಿ ಹಸುಗಳಿಗೆ ಚರ್ಮ ಗಂಟು ರೋಗ ತಗುಲಿದೆ.

ರೋಗ ತಗುಲಿದ ದನ ಕರುಗಳು ಅನ್ನಹಾರ ಸೇವಿಸಲು ಸಾಧ್ಯವಾಗದೆ ಬಳಲಿ ಬೆಂಡಾಗಿ ಹೋಗುತ್ತಿವೆ. ಚರ್ಮ ಗಂಟು ರೋಗ ಜಾನುವಾರುಗಳ ಜೀವನ್ನು ಹಿಂಡುತ್ತಿದೆ.ಕೊಟ್ಟಿಗೆಯಲ್ಲಿ ಒಂದು ಹಸುವಿಗೆ ಚರ್ಮ ಗಂಟು ರೋಗ ತಗುಲಿದರೆ ಹಂತ ಹಂತವಾಗಿ ಹಟ್ಟಿಯಲ್ಲಿರುವ ಎಲ್ಲಾ ರಾಸುಗಳಿಗೂ ಹಬ್ಬುತ್ತದೆ.ಆರಂಭದಲ್ಲಿ ದನ ಕರುಗಳ ಮೈ ಕಣ್ಣು ಬಾಯಿ ದವಡೆ ಮೂಗಿನ ಸೊಳ್ಳೆಗಳ ಮೇಲೆ ಗುಳ್ಳೆಗಳು ಏಳುತ್ತವೆ, ಕಾಲು ಗಂಟುಗಳು ಉದಿಕೊಳ್ಳುತ್ತದೆ ಮೂರನಾಲ್ಕು ದಿನಗಳಲ್ಲಿ ಚರ್ಮ ಗಂಟು ಒಡೆದು ಹೋಗಿ ಕೀವು ತುಂಬಿಕೊಂಡು ರಕ್ತ ಸುರಿಯತ್ತದೆ.

ಸಧ್ಯಕ್ಕೆ ನಾಟಿ ಔಷಧವೆ ಮದ್ದು: ಗೋವುಗಳಿಗೆ ತಗಲುತ್ತಿರುವ ಚರ್ಮ ಗಂಟು ರೋಗಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ನಾಟಿ ಔಷಧವೆ ಮದ್ದಾಗಿದೆ ಗಿಡಮೂಲಿಕೆಯ ಜೌಷಧಗಳನ್ನು ತಯಾರಿಸಿಕೊಳ್ಳಲು ಹೆಚ್ಚಿನ ರೈತರಿಗೆ ಮಾಹಿತಿ ಇಲ್ಲ. ಮಾಹಿತಿ ಕೊರತೆಯಿಂದ ಗೋವುಗಳನ್ನು ಆರೈಕೆ ಮಾಡುವಲ್ಲಿ ರೈತರು ಪರಿತಪಿಸುತ್ತಿದ್ದಾರೆ ಚರ್ಮ ಗಂಟು ರೋಗದ ಬಗ್ಗೆ ಪಶುಸಂಗೋಪನಾ ಇಲಾಖೆ ಕರಾವಳಿ ಭಾಗದಲ್ಲಿ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ರೈತರು ದೂರಿದ್ದಾರೆ. ತರಬೇತಿ ಶಿಬಿರಗಳನ್ನು ಆಯೋಜಿಸಿ ಉಚಿತವಾಗಿ ಗಿಡ ಮೂಲಿಕೆ ಔಷಧಗಳನ್ನು ನೀಡಬೇಕ್ಕೆನ್ನುವುದು ರೈತರ ಆಗ್ರಹ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು