ಕುಂದಾಪುರ: ಕುಂದಬಾರಂದಾಡಿ ಗ್ರಾಮದ ತೊರೊಳ್ಳಿಯಲ್ಲಿ ರೈಲು ಡಿಕ್ಕಿ ಹೊಡೆದು 2 ಕಡವೆಗಳು ಸಾವನ್ನಪ್ಪಿದ ಘಟನೆ ನಡೆದಿದೆ.ಅರಣ್ಯ ಇಲಾಖೆಯ ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿ ನಂತರ ಮಣ್ಣಿನಲ್ಲಿ ಹೂಳಿದರು.
ಎರಡು ತಿಂಗಳುಗಳ ಹಿಂದೆ ಇದೆ ಪರಿಸರದಲ್ಲಿ ರೈಲು ಡಿಕ್ಕಿ ಹೊಡೆದು 2 ಕಡವೆಗಳು ಸಾವನ್ನಪ್ಪಿವೆ.
ಬಯಲು ಪ್ರದೇಶದತ್ತಾ ಆಹಾರವನ್ನು ಹಡುಕಿಕೊಂಡು ಬಂದಿರುವ ಕಡವೆಗಳು ರೈಲು ಹಳಿಯನ್ನು ದಾಟಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ರೈಲು ಡಿಕ್ಕಿ ಹೊಡೆದಿದೆ.