ಕುಂದಗೋಳ: ಕಾಮಾಗಾರಿ ಪ್ರಾರಂಭವಾಗಿದ್ದು ಜನರಿಗೆ ತೆಲೆ ನೋವು ಕಡಿಮೆ ಆಗಿಲ್ಲಾ. ಉತ್ತಮ ಕಾಮಾಗಾರಿ ಆಗುತ್ತದೆ ಅಪಘಾತ, ಇನ್ನಿತರ ಸಂಭವವು ಕಡಿಮೆಯಾಗುತ್ತದೆ ಎನ್ನುತ್ತಿದೆ ಸ್ಥಳೀಯರಿಗೆ ಇದೀಗ ಶಾಕ್ ಉಂಟಾಗಿದೆ. ಚುನಾವಣೆ ಸಮಯದಲ್ಲಿ ಓಟ್ ಗಾಗಿ ಬರುವ ರಾಜಕಾರಣಿಗಳು ಗೆದ್ದ ನಂತರ ಖ್ಯಾರೇ ಎನ್ನುವುದಿಲ್ಲಾ ಯಾಕೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ಕುಂದಗೋಳ ಪಟ್ಟಣದ ಅಭಿವೃದ್ಧಿಗಾಗಿ ನಿರ್ಮಿಸುತ್ತಿರುವ ಕಾಮಗಾರಿಯೊಂದು ಸದ್ಯ ಸ್ಥಳೀಯ ಜನರಿಗೆ ಬೇಸರ ತಂದಿದ್ದು, ಜನ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪ ಮಾಡ್ತಾ ಇದ್ದಾರೆ.
ಕುಂದಗೋಳ ಪಟ್ಟಣದ ಮಾರ್ಕೇಟ್ ರಸ್ತೆಯ ಅಕ್ಕಪಕ್ಕದ ಚರಂಡಿಗಳು ವಾಸದ ಮನೆಗಳಿಗಿಂತ ಎತ್ತರವಾಗಿವೆ, ಇದಲ್ಲದೆ ರಸ್ತೆ ಎತ್ತರಕ್ಕೆ ತಕ್ಕಂತೆ ಚರಂಡಿ ನಿರ್ಮಿಸದೇ ಕಿರಿದಾಗಿ ಚರಂಡಿ ನಿರ್ಮಿಸಿರುವುದರಿಂದ ನಮ್ಮ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವ ಭೀತಿ ಇದೆ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿಗಳು.
ಇನ್ನೂ ರಸ್ತೆ ಅಗಲೀಕರಣ ಕಡಿಮೆಯಾದ ಕಾರಣ ಚರಂಡಿ ಹಾಗೂ ರಸ್ತೆ ಮದ್ಯದ ಖಾಲಿ ಜಾಗಕ್ಕೆ ಹಾಳಾದ ಕಟ್ಟಡದ ತ್ಯಾಜ್ಯ, ಎಲ್ಲೋ ವಿಲೇವಾರಿ ಮಾಡಬೇಕಾದ ಕಸ ಮಿಶ್ರಿತ ಕಲ್ಲನ್ನು ಹಾಕುತ್ತಿರುವುದು ಸಹ ಕಂಡು ಬಂದಿರುವದರಿಂದ ಜನ ರಸ್ತೆ ಹಾಗೂ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ, ಈಗಾಗಲೇ ಚರಂಡಿ ನೀರು ಮುಂದೆ ಸಾಗದೆ ಒಂದೇಡೆ ನಿಂತು ದುರ್ನಾತ ಎಂದಿದೆ ಎನ್ನುತ್ತಿದ್ದಾರೆ.
ಒಟ್ಟಾರೆ ಲೋಕೋಪಯೋಗಿ ಅಧಿಕಾರಿಗಳೇ ನಿತ್ಯ ಕುಂದಗೋಳ ಪಟ್ಟಣ ಸೇರಿದಂತೆ ಹಲವಾರು ಹಳ್ಳಿಯ ಜನ ಓಡಾಡುವ ಕುಂದಗೋಳ ಪಟ್ಟಣದ ಮಾರ್ಕೇಟ್ ರಸ್ತೆ ಅವ್ಯವಸ್ಥೆಯ ಸರಿಪಡಿಸಿ ಎನ್ನುವುದು ಆಶಯ.