News Karnataka Kannada
Monday, April 29 2024
ಉಡುಪಿ

ಕಾರ್ಕಳ: ಅಡಿಕೆಯಲ್ಲಿ ತೀವ್ರಗೊಂಡ ಕೆಂಪು ಜೇಡ ನುಸಿ ಭಾಧೆ

Karkala: Red spider crushed in arecanut
Photo Credit : News Kannada

ಕಾರ್ಕಳ: ಈ ಸಾಲಿನ ಬೇಸಿಗೆ ರೈತರನ್ನು ಕಂಗೆಡಿಸುತ್ತಿದ್ದು, ಬಿಸಿಲಿನ ತೀವ್ರತೆಗೆ ಅಡಿಕೆಯಲ್ಲಿ ಕೆಂಪು ಜೇಡ ನುಸಿ ಭಾಧೆ ಕೂಡ ತೀವ್ರವಾಗಿ ಹರಡಿದ್ದು ಮಳೆ ಬಿದ್ದ ನಂತರದಲ್ಲಿ ಅದರ ಲಕ್ಷಣಗಳು ಸಸಿಗಳು ಸುಟ್ಟ ರೀತಿ ಕಂಡುಬರುತ್ತಿದೆ. ಹೆಚ್ಚಿನ ರೈತರು ಇದರ ಲಕ್ಷಣಗಳನ್ನು ಬಿಸಿಲಿನ ಪರಿಣಾಮದಿಂದಾದ ಲಕ್ಷಣಗಳೆಂದು ತಪ್ಪು ಗ್ರಹಿಕೆಯಲ್ಲಿದ್ದಾರೆ. ಅಡಿಕೆಗೆ ಪಶ್ಚಿಮದ ಬಿಸಿಲು ನಿರಂತರವಾಗಿ ಬಿದ್ದಾಗ ಎಲೆಗಳಲ್ಲಿ ಕಂಡು ಬರುವ ಲಕ್ಷಣಗಳಾದ ಹಳದಿಯಾಗುವಿಕೆ ಹಾಗೂ ಎಲೆ ಸುಡುವಿಕೆ ಲಕ್ಷಣಗಳು ಈ ಜೇಡ ನುಸಿ ಭಾದೆಯಲ್ಲೂ ಕಂಡು ಬರುವುದರಿಂದ ರೈತರನ್ನು ತಪ್ಪು ಗ್ರಹಿಕೆಗೆ ದೂಡಿದೆ.

ಅಡಿಕೆ ಬೆಳೆಗೆ ಪ್ರಮುಖವಾಗಿ ಕೆಂಪು ಹಾಗೂ ಬಿಳಿ ಎಂಬ ಎರಡು ಜಾತಿಯ ಜೇಡ ನುಸಿ (Spider mite)ಗಳು ಭಾದೆ ಉಂಟು ಮಾಡುತ್ತಿದ್ದು ಇವುಗಳು ಸಾಮಾನ್ಯವಾಗಿ ಮಾರ್ಚ್‍ನಿಂದ ಮೇ ತಿಂಗಳವರೆಗೆ ಕಂಡು ಬರುತ್ತವೆ. 1-5 ವರ್ಷದ ಸಸಿಗಳು ಹೆಚ್ಚು ಭಾದೆಗೆ ಒಳಪಟ್ಟರೂ ಸಹ 15-20 ವರ್ಷದ ಮರಗಳಲ್ಲೂ ಇದರ ಭಾದೆ ಕಂಡು ಬರುತ್ತಿದೆ. ಈ ಜೀವಿಯ ಮರಿ ಹಾಗೂ ಫ್ರೌಡ ನುಸಿಗಳು ಗರಿಗಳ ತಳಭಾಗದಲ್ಲಿ ಕುಳಿತು ರಸ ಹೀರುವುದರಿಂದ ಸಣ್ಣ ಹಳದಿ ಚುಕ್ಕೆಗಳು ಕಾಣಿಸಿಕೊಂಡು ತರುವಾಯ ಎಲೆ ಹಳದಿಯಾಗಿ ಸುಟ್ಟ ಲಕ್ಷಣ ತೋರಿಸುತ್ತದೆ. ಇವುಗಳು ಅತೀ ಚಿಕ್ಕ ಮೈಟ್ ಜಾತಿಗೆ ಸೇರಿದ ಜೀವಿಗಳಾಗಿದ್ದು, ತೀಕ್ಷ್ಣವಾಗಿ ನೋಡಿದಲ್ಲಿ ಬರಿಗಣ್ಣಿನಿಂದ ಇವುಗಳ ಚಲನವಲನ ಗಮನಿಸಬಹುದಾಗಿದೆ. ಎಲೆಗಳ ತಳಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಜೇಡ ಬಲೆ ಲಕ್ಷಣಗಳಿದ್ದು, ಗರಿಯ ತಳಭಾಗವನ್ನು ಬೆರಳಿನಿಂದ ಉಜ್ಜಿದಲ್ಲಿ ಕೆಂಪು ನುಸಿ ಭಾದೆ ಇದ್ದಲ್ಲಿ ಕುಂಕುಮ ರೀತಿಯ ಪುಡಿ ಬೆರಳಿಗೆ ಅಂಟಿಕೊಳ್ಳುತ್ತದೆ.

ಈ ಜೇಡ ನುಸಿಗಳ ಭಾಧೆ ಮಳೆ ಹೆಚ್ಚಾದಂತೆ ಕಡಿಮೆಗೊಳ್ಳವುದಿದ್ದು ಪ್ರಸ್ತುತ ಮಳೆ ಕಡಿಮೆಯಾದ ಕಾರಣ ಕೀಟ ಭಾಧೆ ಹೆಚ್ಚು ಕಂಡುಬರುತ್ತಿದೆ. ಇದರ ನಿಯಂತ್ರಣಕ್ಕಾಗಿ ಹೆಚ್ಚು ಭಾದೆಗೆ ಒಳಗಾದ ಗರಿಗಳನ್ನು ಕತ್ತರಿಸುವುದರೊಂದಿಗೆ ಕೀಟ ನಾಶಕಗಳ ಸಿಂಪರಣೆ ಕೈಗೊಳ್ಳಬಹುದಾಗಿದೆ. ಭಾದೆಯ ತೀವ್ರತೆ ಕಡಿಮೆ ಇರುವ ತೋಟಗಳಲ್ಲಿ ಬೇವಿನ ಎಣ್ಣೆಯನ್ನು 15 ದಿನಗಳ ಅಂತರದಲ್ಲಿ ಸಿಂಪಡಿಸಬಹುದು. ತೀವ್ರಭಾದಿತ ತೋಟಗಳಲ್ಲಿ ಇಥಿಯಾನ್ (Ethion) ಅಥವಾ ಪ್ರೋಪಾರ್‍ಗೈಟ್ (Propargite) ಅಥವಾ ಸ್ಪೈರೋಮೆಸಿಫೆನ್ (Spiromesifen) ಔಷಧಿಗಳನ್ನು 2ml/ ಲೀಟರ್ ನೀರಿಗೆ ಬೆರೆಸಿ ಗರಿಗಳ ತಳಭಾಗಕ್ಕೆ ಸಿಂಪಡಿಸಬೇಕು. ಸಿಂಪರಣೆ ಮಾಡಿದ ನಂತರ ಕನಿಷ್ಠ 2 ತಾಸುಗಳು ಮಳೆ ಬಿಡುವು ಅವಶ್ಯ. ಅವಶ್ಯವಿದ್ದಲ್ಲಿ 15 ದಿನಗಳ ಅಂತರದಲ್ಲಿ ಮತ್ತೊಮ್ಮೆ ಸಿಂಪರಣೆ ಕೈಗೊಳ್ಳಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು