ಕಾರ್ಕಳ: ಅನಧಿಕೃತವಾಗಿ ಗೋವು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಶಿರ್ಲಾಲು ಗ್ರಾಮದ ನಿವಾಸಿಗಳಾದ ಜಗನ್ನಾಥ ಶೆಟ್ಟಿ (58) ಮತ್ತು ಪ್ರಸಾದ್ ಪೂಜಾರಿ (23) ಹಾಗೂ ಬಂಟ್ವಾಳದ ಫರಂಗಿಪೇಟೆ ನಿವಾಸಿಗಳಾದ ಜಬ್ಬಾರ್ (24) ಮತ್ತು ಹೈದರ್ ಅಲಿ (26) ಎಂದು ಗುರುತಿಸಲಾಗಿದೆ.
ಆ.7ರಂದು ಬೆಳಗ್ಗೆ ಕೆರ್ವಾಶೆಯಿಂದ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನವನ್ನು ಹಿಂಬಾಲಿಸಿದ್ದಾರೆ. ಶಂಕಿತರು ಬಜಗೋಳಿಯಲ್ಲಿ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ, ಆದರೆ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.