ಮಡಿಕೇರಿ: ಕೊಡಗು ಜಿಲ್ಲೆಯ ಕೇರಳದ ಗಡಿ ಭಾಗದ ಆರಳಂ ಗ್ರಾಮದಲ್ಲಿ ನಕ್ಸಲರ ತಂಡ ಪತ್ತೆಯಾಗಿದ್ದು, ಈ ಕುರಿತಂತೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಕರ್ನಾಟಕ – ಕೇರಳ ಗಡಿಭಾಗವನ್ನು ಸಂಪರ್ಕಿಸುವ ಆರಳಂ ಗ್ರಾಮದಲ್ಲಿ ಮಹಿಳೆಯರ ಸಹಿತ 2 ಗುಂಪುಗಳನ್ನೊಳಗೊಂಡ ನಕ್ಸಲರ ತಂಡವೊಂದು ಹತ್ತಿರವಿರುವ ಮನೆಗಳಿಗೆ ಭೇಟೀ ನೀಡಿ ಅಗತ್ಯ ವಸ್ತುಗಳನ್ನು ಸಂಗ್ರಹಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಬಾಣಾಸುರ ಸಾಗರ ಅಣೆಕಟ್ಟು ಮತ್ತು ಕಬಿನಿ ಜಲಾಶಯದ ಪಕ್ಕದಲ್ಲಿ ನೆಲೆಯಾಗಿರುವುದಾಗಿ ಕುರುಹುಗಳು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.