ಕುಂದಾಪುರ: ಪ್ರಾಕೃತಿಕವಾಗಿ ನಡೆಯುವ ಭೂಕಂಪನವನ್ನು ತಡೆಯಲಾಗದಿದ್ದರೂ ಅದರಿಂದ ಆಗುವ ಪರಿಣಾಮಗಳ ತೀವ್ರತೆ ಹಾಗೂ ಕಟ್ಟಡಗಳನ್ನು ಸರಿಯಾಗಿ ಕಟ್ಟುವುದರ ಮೂಲಕ ಕಡಿಮೆಗೊಳಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ಜಪಾನ್ ದೇಶ ಜಗತ್ತಿಗೆ ಮಾದರಿಯಾಗಿದೆ. ನಮ್ಮ ಕರಾವಳಿ ಪ್ರದೇಶ ಸುರಕ್ಷಿತ ವಲಯದಲ್ಲಿರುವುದರಿಂದ ಭೂಕಂಪದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಇಸ್ರೋ ಮಾಜಿ ವಿಜ್ಞಾನಿ ಡಾ| ಕೆ. ಗಣೇಶ್ ರಾಜ್ ಹೇಳಿದರು.
ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಐ.ಎಂ. ಜಯರಾಮ ಶೆಟ್ಟಿ ಸ್ಮರಣಾರ್ಥ ಆಯೋಜಿಸಿದ `ಭೂಕಂಪ ಹಾಗೂ ಸಮಾಜದ ಮೇಲೆ ಅದರ ಪರಿಣಾಮ’ ಕುರಿತ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನ ವಿವಿಧೆಡೆ ನಡೆದ ಭೂಕಂಪಗಳು ಹಾಗೂ ಅವುಗಳಿಂದ ಸಮಾಜದ ಮೇಲೆ ಆದ ನಷ್ಟ ಮತ್ತು ದುಷ್ಪರಿಣಾಮಗಳನ್ನು ಅತ್ಯಂತ ವಿವರವಾಗಿ ತಿಳಿಸಿದ ಅವರು,ಕಟ್ಟಡ ನಿರ್ಮಾಣ ಸಮಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಐಎಂಜೆ ಸಂಸ್ಥೆಗಳ ಮುಖ್ಯಸ್ಥ ಸಿದ್ಧಾರ್ಥ ಜೆ. ಶೆಟ್ಟಿ, ನಿರ್ದೇಶಕ ಪ್ರೋ.ದೋಮ ಚಂದ್ರಶೇಖರ್, ಎಂಐಟಿಕೆ ಪ್ರಾಂಶುಪಾಲ ಡಾ|ಅಬ್ದುಲ್ ಕರೀಂ,ಐಎಂಜೆ ಪ್ರಾಂಶುಪಾಲ ಡಾ| ಪ್ರತಿಭಾ ಎಂ. ಪಟೇಲ್, ಎಂಸಿಎನ್ ಪ್ರಾಂಶುಪಾಲ, ಕಾರ್ಯಕ್ರಮದ ಸಂಯೋಜಕ ಜೆನ್ನಿಫರ್ ಮಿನೇಜಸ್,ಸಂಸ್ಥಾಪಕರ ದಿನಾಚರಣೆಯ ವ್ಯವಸ್ಥಾಪಕ, ಎಂಐಟಿಕೆ ಉಪಪಾಂಶುಪಾಲ ಪ್ರೋ| ಮೆಲ್ವಿನ್ ಡಿಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ| ರಾಮಕೃಷ್ಣ ಹೆಗ್ಡೆ, ಸಂಶೋಧಕ ಡಾ| ಸತ್ಯಜಿತ್, ವೈಸ್ ಪ್ರಿನ್ಸಿಪಾಲ್ ,ವಿಭಾಗ ಮುಖ್ಯಸ್ಥರು,ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.