ಉಡುಪಿ: ಉಡುಪಿ ಜಿಲ್ಲೆ ಸರ್ಕಾರಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆಹ್ವಾನ ಬರಹದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಕುವೆಂಪು ಅವರ ‘ಇದು ಜ್ಞಾನ ದೇಗುಲ, ಕೈಮುಗಿದು ಒಳಗೆ ಬಾ’ ಬರಹವನ್ನು ಬದಲಾಯಿಸಲು ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯದ ಅನೇಕ ವಸತಿ ಶಾಲೆಗಳಲ್ಲಿ ಸೂಚಿತ ಬದಲಾವಣೆ ಮಾಡಲಾಗಿದೆ.
ಕೈ ಮುಗಿದು ಒಳಗೆ ಬಾ ಎಂಬುದಕ್ಕೆ ಬದಲಾಗಿ ‘ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾಯಿಸಲಾಗಿತ್ತು. ಆದರೆ, ಉಡುಪಿ ಜಿಲ್ಲೆಯಲ್ಲಿ ಈ ಬಗ್ಗೆ ಗೊಂದಲಗಳಿರುವುದರಿಂದ ವಸತಿ ನಿಲಯಗಳ ಮುಖ್ಯಸ್ಥರು ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಎಂಟು ವಸತಿ ನಿಲಯಗಳಿದ್ದು, ಯಾವುದೇ ಕೇಂದ್ರಗಳಲ್ಲೂ ಸ್ವಾಗತ ಬರಹದಲ್ಲಿ ಬದಲಾವಣೆ ಮಾಡಿಲ್ಲ. ರಾಜ್ಯದ ಇತರೆ ಜಿಲ್ಲೆಗಳನ್ನು ಗಮನಿಸಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಆಯಾ ಸಂಸ್ಥೆಗಳ ಮುಖ್ಯಸ್ಥರು ತಿಳಿಸಿದ್ದಾರೆ.