News Karnataka Kannada
Friday, May 03 2024
ಉಡುಪಿ

ಗ್ಯಾಸ್ ಟ್ಯಾಂಕರ್ ಅಪಘಾತಕ್ಕೆ ನವಯುಗ ಕಂಪನಿ ಹೊಣೆ: ಪರಿಹಾರಕ್ಕೆ ‌ಅನ್ಸಾರ್ ಅಹಮದ್ ಆಗ್ರಹ

ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಚರ್ಚ್ ಮುಂಭಾಗ ನಡೆದ ಗ್ಯಾಸ್ ಬುಲೆಟ್ ಟ್ಯಾಂಕರ್ ಅಪಘಾತ ನಡೆದಿದ್ದು ಪರಿಣಾಮ ಚಾಲಕನ ಎರಡು ಕಾಲುಗಳು ತುಂಡಾಗಿದೆ.
Photo Credit : News Kannada

ಉಡುಪಿ: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಚರ್ಚ್ ಮುಂಭಾಗ ನಡೆದ ಗ್ಯಾಸ್ ಬುಲೆಟ್ ಟ್ಯಾಂಕರ್ ಅಪಘಾತ ನಡೆದಿದ್ದು ಪರಿಣಾಮ ಚಾಲಕನ ಎರಡು ಕಾಲುಗಳು ತುಂಡಾಗಿದೆ. ಹೆದ್ದಾರಿಯ ರಸ್ತೆ ಮಧ್ಯದಲ್ಲಿ ನವಯುಗ ಕಂಪನಿಗೆ ಸೇರಿದ ವಾಹನಗಳು ಯಾವುದೇ ಸುರಕ್ಷಿತ ನಿಯಮಗಳನ್ನು ಅನುಸರಿಸದೇ ಸ್ವಚ್ಛತೆ ಹಾಗೂ ಇನ್ನಿತರ ಕೆಲಸಗಳನ್ನು ನಡೆಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ.

ನಿನ್ನೆ ಸುಮಾರು 5:00 ಗಂಟೆ ಸಮಯಕ್ಕೆ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬುಲೆಟ್ ಟ್ಯಾಂಕರ್ ರಸ್ತೆಯಲ್ಲಿ ಯಾವುದೇ ಸೂಚನಾ ಫಲಕವನ್ನು ಅಳವಡಿಸದೆ ನಿಂತಿರುವ ನವಯುಗ ಕಂಪನಿಗೆ ಸೇರಿದ ವಾಹನ ಒಂದಕ್ಕೆ ಡಿಕ್ಕಿ ಹೊಡೆದು, ಟ್ಯಾಂಕರ್ ವಾಹನ ರಸ್ತೆ ಎಡಭಾಗಕ್ಕೆ ಹೋಗಿ ನಿಂತಿದೆ. ವಾಹನ ಎರಡು ಅಡಿ ಮುಂದೆ ಚಲಿಸಿದ್ದರೆ ಪಲ್ಟಿಯಾಗಿ ಕರೆಂಟ್ ಕಂಬ ಹಾಗೂ ಮನೆಗಳು ಮೇಲೆ ಬಿದ್ದು ಅನಾಹುತ ಸಂಭವಿಸುತ್ತಿತ್ತು.

ಈ ಅಪಘಾತ ನವಯುಗ ಕಂಪನಿಯ ಅಜಾಗರೂಕತೆಯಿಂದ ಉಂಟಾಗಿದ್ದು ಕಂಪನಿ ಆ ಚಾಲಕನಿಗೆ ಸೂಕ್ತ ಪರಿಹಾರವನ್ನು ಒದಗಿಸಿ ಕೊಡಬೇಕು ಹಾಗೂ ಮುಂದಕ್ಕೆ ಇಂತಹ ಘಟನೆಗಳು ನಡೆಯದಂತೆ ಕಂಪೆನಿಯವರು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಆಗ್ರಹ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು