News Karnataka Kannada
Tuesday, May 07 2024
ಉಡುಪಿ

ಪೆರ್ಣಂಕಿಲದಲ್ಲಿ ಪೇಜಾವರ ಶಾಖಾಮಠಕ್ಕೆ ಶಿಲಾನ್ಯಾಸ

Foundation stone laid for Pejawar Shakha Mutt at Pernankila
Photo Credit : News Kannada

ಉಡುಪಿ: ಉಡುಪಿ ಅಷ್ಟಮಠಗಳಲ್ಲೊಂದಾದ ಪೇಜಾವರ ಮಠದ ಆಶ್ರಯದಲ್ಲಿ ಸಂಪೂರ್ಣ ನವೀಕರಣಗೊಳ್ಳುತ್ತಿರುವ ಪೆರ್ಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಬಳಿ ಇರುವ ಶಾಖಾಮಠವನ್ನು ನವನಿರ್ಮಾಣಕ್ಕೆ ಸೋಮವಾರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿದರು.

ಈ ಪುರಾತನವಾದ ಶಾಖಾಮಠವು ಶಿಥಿಲಗೊಂಡಿದ್ದು, ಕ್ಷೇತ್ರದ ಸಮಗ್ರ ಜೀರ್ಣೋದ್ಧಾರದೊಂದಿಗೆ ಶಾಖಾಮಠವನ್ನು ಭಗವದ್ಭಕ್ತರ ಸಹಾಯದಿಂದ ಪಾರಂಪರಿಕ ರೀತಿಯಲ್ಲಿ ನವನಿರ್ಮಾಣ ಮಾಡಲುದ್ದೇಶಿಸಲಾಗಿದೆ.

ಕ್ಷೇತ್ರದ ವಾಸ್ತುತಂತ್ರಜ್ಞರಾದ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು ಮತ್ತು ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಮಧುಸೂಧನ ತಂತ್ರಿಗಳ ಧಾರ್ಮಿಕ ಮಾರ್ಗದರ್ಶನದಲ್ಲಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್, ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಪದಾಧಿಕಾರಿಗಳಾದ ಸದಾನಂದ ಪ್ರಭು, ಉಮೇಶ್ ನಾಯಕ್, ಸಂದೀಪ್ ನಾಯಕ್ ಹೆಬ್ಬಾಗಿಲು, ಮಠದ ವ್ಯವಸ್ಥಾಪಕರಾದ ಸುರೇಶ್ ತಂತ್ರಿ, ಮಹೇಶ್ ಕುಲಕರ್ಣಿ, ಶ್ರೀಪತಿ ಭಟ್, ಬಾಲಚಂದ್ರ ಭಟ್, ಸುನೀತಾ ನಾಯಕ್, ಬೇಬಿ ನಾಯಕ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಮಠದ ಶಿಲಾನ್ಯಾಸದ ಸವಿನೆನಪಿಗಾಗಿ ಮಠದ ಪಕ್ಕದಲ್ಲಿ ಶ್ರೀಗಳು ಬಿಲ್ವಪತ್ರೆಯ ಗಿಡ ನೆಟ್ಟು, ಮೂಲಕ ದೇವಸ್ಥಾನದ ಪರಿಸರದಲ್ಲಿ ಸಾವಿರ ಸಸಿ ನೆಡುವ ವನಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು