ಉಡುಪಿ: ಉಡುಪಿಯ ಕಡಿಯಾಳಿ ಓಶಿಯನ್ ಪರ್ಲ್ ಹೋಟೆಲ್ ಎದುರು ಹಿಮಾಲಯ ಸ್ಕ್ವೇರ್ ಒಂದನೇ ಮಹಡಿಯಲ್ಲಿ ಎಕ್ಸೆಲ್ಡೆಂಟ್ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಜನವರಿ 22ರ ಇಂದು ಶುಭಾರಂಭಗೊಂಡಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿ ಕೃಷ್ಣಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮಿಜಿ, ಮಂಗಳೂರು ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ವೈ ಹಾಗೂ ಉಡುಪಿಯ ಶಾಸಕ ಯಶ್ಪಾಲ್ ಆನಂದ್ ಸುವರ್ಣ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
ಡಾ. ಭಾರ್ಗವಿ ಮುರಳಿಕೃಷ್ಣ ಬಿಡಿಎಸ್, ಎಂಡಿಎಸ್ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ಹಾಗೂ ಡಾ. ಮಿಥುನ್ ಉಪಾಧ್ಯ ಬಿಡಿಎಸ್, ಎಂಡಿಎಸ್ ಪ್ರಾಸ್ತೋಡಾಂಟಿಸ್ಟ್ ಮತ್ತು ಇಂಪ್ಲಾಂಟಾಲಜಿಸ್ಟ್ ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.