News Karnataka Kannada
Wednesday, May 08 2024
ಉಡುಪಿ

ಕೊರಗರಿಗೆ ಮಂಜೂರಾದ ಜಾಗದ ಅತಿಕ್ರಮಣ: ಸೂಕ್ತ ನ್ಯಾಯ ಒದಗಿಸುವಂತೆ ಕೊರಗ ಕುಟುಂಬಗಳ ಆಗ್ರಹ

Encroachment of land allotted to Koragas: Koraga families demand proper justice
Photo Credit : News Kannada

ಬ್ರಹ್ಮಾವರ: ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಾಡಿ ಗ್ರಾಮದಲ್ಲಿ ಕೊರಗರಿಗೆ ಮಂಜೂರಾತಿ ಆದ ಜಾಗವನ್ನು ವ್ಯಕ್ತಿಯೋರ್ವರು ಕಬಳಿಸಿರುವುದಾಗಿ ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನೊಂದ ಕೊರಗ ನಿವಾಸಿಗಳು, ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಾಡಿ ಗ್ರಾಮದ ಮಾನಂಬಳ್ಳಿ ಎಂಬಲ್ಲಿ 10 ಕೊರಗ ಕುಟುಂಬಗಳಿಗೆ ತಲಾ ಒಂದು ಎಕ್ರೆಯಂತೆ ಭೂಮಿ ಮಂಜೂರಾಗಿದ್ದು ಆ ಭೂಮಿಯಲ್ಲಿ ಪುನರ್ವಸತಿ ಸಂಬಂಧಿಸಿದ ಕುಡಿಯುವ ನೀರು, ರಸ್ತೆ, ವಿದ್ಯುತ್ ಕಾರ್ಯದ ಅಭಿವೃದ್ದಿ ಕೆಲಸಗಳು ಐ.ಟಿ.ಡಿಪಿ ಇಲಾಖೆಯ ಮೂಲಕ ಆಗಿರುತ್ತದೆ.

ಈಗ ಸದ್ಯ ಆ ಸ್ಥಳದಲ್ಲಿ 15 ಕುಟುಂಬಗಳು ವಾಸವಾಗಿದ್ದೇವೆ. ಅಲ್ಲಿನ ವ್ಯಕ್ತಿಯೋರ್ವರು ಗುಂಪಿಗೆ ಮಂಜೂರಾದ ನೀರಾವರಿ ಬಾವಿಯನ್ನು ಅತಿಕ್ರಮಿಸಿದ್ದು , ಸ್ಥಳೀಯರು ತಿರುಗಾಡುವ ರಸ್ತೆಗೆ ಬೇಲಿ ಹಾಕಿದ್ದಾರೆ. ಇದರಿಂದ ಇಲ್ಲಿನ ಕೊರಗ ಕುಟುಂಬದವರಿಗೆ ಸಮಸ್ಯೆ ಆಗಿದ್ದು, ಆದಷ್ಟು ಬೇಗ ಅತಿಕ್ರಮಣ ತೆರವು ಮಾಡಬೇಕೆಂದು ಅವರು ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು