ಉಡುಪಿ: ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ದ ರಾಮಸಮುದ್ರ ಕೆರೆಯಲ್ಲಿ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ನಿತಿನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು.
ನಿಂತ ನೀರಿನಿಂದಾಗಿ ಕೆಸರು ತುಂಬಿಕೊಂಡಿದ್ದ ಕೆರೆಯಲ್ಲಿ ಸತತ 2 ದಿನ ಹುಡುಕಾಡಿದರೂ ಸರ ಸಿಕ್ಕಿರಲಿಲ್ಲ. ಈ ವಿಷಯ ತಿಳಿದ ಆಪತ್ಪಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಸ್ಥಳಕ್ಕೆ ಧಾವಿಸಿತು.
ಸ್ಥಳೀಯ ದೈವ ದೇವರಿಗೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ತಾಯಿಗೆ ಕೈ ಮುಗಿದು ಬೇಡಿಕೊಂಡು ಕೆರೆಗಿಳಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಕೇವಲ 15 ನಿಮಿಷಗಳಲ್ಲಿ ಹುಡುಕಾಡಿ ಸುಮಾರು 2 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮೇಲೆತ್ತಿ ವಾರಿಸುದಾರರಿಗೊಪ್ಪಿಸಿ ಮಾನವೀಯತೆ ಮೆರೆದರು. ಕೆಲವು ದಿನಗಳ ಹಿಂದೆ ಸ್ವರ್ಣ ನದಿಗೆ ಬಿದ್ದಿದ್ದ ಚಿನ್ನದ ಸರವನ್ನು ಈಶ್ವರ್ ಮಲ್ಪೆ ತೆಗೆದು ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.