ಉಡುಪಿ: ಡಿಸಿಎಂ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ವಾಪಸ್ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಡಿಕೆಶಿ ವಿರುದ್ಧ ರಾಜಕೀಯ ಕಾರಣಗಳಿಗೆ ಕೇಸ್ ಮಾಡಿದ್ದರು.
ಸ್ಪೀಕರ್ ಪರ್ಮಿಷನ್ ತಗೊಂಡಿರಲಿಲ್ಲ, ಅಡ್ವಕೇಟ್ ಜನರಲ್ ಅಭಿಪ್ರಾಯ ಪಡೆದಿರಲಿಲ್ಲ. ಮುಖ್ಯಮಂತ್ರಿಗಳು ಕೂಡ ಲಿಖಿತವಾಗಿ ಕೊಟ್ಟಿರಲಿಲ್ಲ. ಕೇವಲ ಮೌಖಿಕ ಹೇಳಿಕೆಯ ಮೇಲೆ ಕೇಸ್ ಮಾಡಿದ್ದರು ಎಂದರು.
ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವ ಕಾರಣದಿಂದ ಕೇಸ್ ಮಾಡಿದ್ದರು ಎಂದು ಎಲ್ಲರಿಗೂ ಗೊತ್ತಿದೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಮುಖ್ಯಮಂತ್ರಿಗಳೇ ನೀಡುತ್ತಾರೆ. ಬೇಕಾದರೆ ಕಾನೂನು ಸಚಿವರು ಹೇಳುತ್ತಾರೆ. ನಾವು ಮೊದಲಿಂದಲೂ ಇದನ್ನು ಹೇಳಿಕೊಂಡು ಬಂದಿದ್ದೇವೆ ಎಂದು ಹೇಳಿದರು.