ಬೈಂದೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಬೈಂದೂರು ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ಕಾರ್ಯಕರ್ತರು ಹೆಮ್ಮಾಡಿ ಜ್ಯುವೆಲ ಪಾರ್ಕ್ ಜಯಶ್ರೀ ಸಭಾಭವನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟೆಹೊಳೆ ಪರ ಕಾರ್ಯಕರ್ತರು ಬೆಂಬಲಿಸಿ ಜೈಕಾರ ಕೂಗಿದರು,
ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಬಿಜೆಪಿ ಪಕ್ಷ ಯಾವಾಗಲೂ ಜನಸಾಮಾನ್ಯರ ಪಕ್ಷ, ಇಂದು ಸಾಮಾನ್ಯರಲ್ಲಿ ಸಾಮಾನ್ಯನಾದ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯನ್ನು ಗುರುತಿಸಿ ಟಿಕೆಟು ನೀಡಿದೆ, ಈ ಚುನಾವಣೆ ಗೋಪಾಲ್ ಪೂಜಾರಿ ಹಾಗೂ ಗುರುರಾಜ್ ಗಂಟೆಹೊಳೆ ಜಿದ್ದಾಜಿದ್ದಿಯಲ್ಲ ಇದು ಬೈಂದೂರು ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರವಾದಿ ಹಾಗೂ ಭಯೋತ್ಪಾದಕರ ನಡುವಿನ ಈ ಬಾರಿ ಚುನಾವಣೆ ಎಂದು ಹೇಳಿದರು, ಗುರುರಾಜ್ ಗಂಟಿಹೊಳೆ ಒಂದು ವೇಳೆ ಸೋತರೆ ಅದು ಬಿಜೆಪಿ ಸೋಲಲ್ಲ ! ಅದುವೇ ಬಿಜೆಪಿ ಸಾಮಾನ್ಯ ಕಾರ್ಯಕರ್ತನ ಸೋಲು, ಪ್ರತಿ ಗ್ರಾಮ ಮಟ್ಟದಲ್ಲೂ ಸಕ್ರಿಯವಾಗಿ ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು,
ಬಿಜೆಪಿ ಅಭ್ಯರ್ಥಿ ಬಿಜೆಪಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಗುರುರಾಜ್ ಗಂಟೆಹೊಳೆ ನಾನು ಈ ಹಿಂದೆಯೂ ಸಾಮಾನ್ಯ ಕಾರ್ಯಕರ್ತ, ಮುಂದೆಯೂ ಸಹ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಪರ ದುಡಿಯುವೆ , ಬಡ ಕಾರ್ಯಕರ್ತರ ನೋವು ಹಾಗೂ ವರ್ಷದ ಯಾವ ಯಾವ ತಿಂಗಳಿಗೆ ಕಾರ್ಯಕರ್ತನಿಗೆ ತೊಂದರೆ ಬರುತ್ತದೆ ಎಂದು ಏನೆಂದು ನನಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ, ಎಂದು ಹೇಳಿದರು,
ಈ ಸಂದರ್ಭ ಬೈಂದೂರು ಮಂಡಲ ಕ್ಷೇತ್ರಧ್ಯಕ್ಷರಾದ ದೀಪಕ್ ಶೆಟ್ಟಿ ನೇತೃತ್ವದಲ್ಲಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು ಹಾಗೂ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ನನ್ನ ಸಂಪರ್ಕದಲ್ಲಿ ಇದ್ದಾರೆ ಇನ್ನು ಮೂರು ನಾಲ್ಕು ದಿನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನವರು ಬೈಂದೂರು ಆಗಮಿಸುವ ಹಿನ್ನೆಲೆಯಲ್ಲಿ ಬೃಹತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ ನಡೆಯುವ ವೇಳೆ ಸಾವಿರಾರು ಸಂಖೆಯ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದರು
ಈ ಸಭೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕರ್ತರು ಉಪಸ್ಥಿತರಿದ್ದರು