ಉಡುಪಿ : ತನ್ನ ಸ್ವಂತ ಬಸ್ಸಿನ ಚಕ್ರಕ್ಕೆ ಸಿಲುಕಿ ಮಾಲೀಕ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.ದಯಾನಂದ ಶೆಟ್ಟಿ ಮೃತ ದುರ್ದೈವಿ.
ದಯಾನಂದ ಶೆಟ್ಟಿಯವರ ಬಸ್ನ್ನು ರಿಪೇರಿಗೆಂದು ಅತ್ರಾಡಿಯ ಗ್ಯಾರೇಜ್ಗೆ ಕೊಡೊಯ್ಯಲಾಗಿತ್ತು ಈ ಸಂಬಂಧ ಅವರು ತಮ್ಮ ಬಸ್ ಇರುವ ಗ್ಯಾರೇಜ್ಗೆ ಹೋಗಿದ್ದಾರೆ ಈ ವೇಳೆ ಅಜಾಗರುಕತೆಯಿಂದ ಮೆಕ್ಯಾನಿಕ್ ಇಂಜಿನ್ ಸ್ಟಾಟ್ ಮಾಡಿದ್ದಾನೆ ಬಸ್ಸಿನ ಮುಂದೆಯೇ ನಿಂತಿದ್ದ ಮಾಲೀಕ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡಿದ್ದಾನೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸದರೂ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.