ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ಬಂದರಿನಿಂದ ಮೀನುಗಾರಿಕಾ ತೆರಳಿದ ದೋಣಿಗಳಲ್ಲಿ ಎರಡು ದೋಣಿ ಗಾಳಿ ಮತ್ತು ಅಲೆಗೆ ಸಿಕ್ಕಿ ದೋಣಿ ಮುಳುಗಿ ಅದರಲ್ಲದ್ದ ಇಬ್ಬರನ್ನೂ ರಕ್ಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ ಭಟ್ಕಳ ಬಂದರಿನ ಬೆಳಕೆಯಿಂದ ಮೀನುಗಾರಿಕಾ ತೆರಳಿದ ದೋಣಿಗಳು ಮೀನುಗಾರಿಕೆ ಮಾಡುವಾಗ ರಭಸವಾಗಿ ಬಿಸಿದ ಗಾಳಿ ಮತ್ತು ಅಲೆಗೆ ದೋಣಿಯಲ್ಲಿದ್ದ ಹುಟ್ಟು (ನೀರು ತೆಳ್ಳುವ ಸಾಧನ ) ಸಮುದ್ರ ಪಾಲಾಗಿದ್ದು ಎರಡು ದೋಣಿಯಲ್ಲಿದ್ದ ಇಬ್ಬರು ಯುವಕರು ದೋಣಿ ಹಿಡಿದು ಕೊಂಡು ನೀರಿನಲ್ಲಿ ತೆಲುತ್ತಿದ್ದು ಅಲ್ಲಿ ಹತ್ತಿರವಿದ್ದ ದೋಣಿಯವರು ರಕ್ಷಣೆ ಮಾಡಿರುತ್ತಾರೆ ದೋಣಿಯಲ್ಲಿದ್ದ ರಾಮ(42) ಕೃಷ್ಣ (40) ದೋಣಿ ಮತ್ತು ಅದರಲ್ಲಿದ್ದ ಬಲೆಗಳು ಸಮುದ್ರದ ಪಾಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.