ಉಡುಪಿ: ಪ್ರಸಿದ್ಧ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ದಾನಿ ಉಡುಪಿ ಅಜ್ಜರಕಾಡಿನ ಭಗವಾನ್ದಾಸ್ ಅಡ್ಯಂತಾಯ ಅವರು ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮೂರು ಮಂದಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹಾಗೂ ಅನಾರೋಗ್ಯ ಪೀಡಿತ ಬಡ ಮಹಿಳೆಯ ಚಿಕಿತ್ಸೆಗೆ ಒಟ್ಟು 30000 ರೂ. ಆರ್ಥಿಕ ನೆರವು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ ಕಾಪು ಅವರಿಗೆ15,500 ರೂ., ಅಶ್ವಿನಿ ಹಾಗೂ ಹಾಗೂ ಉಡುಪಿಯ ವರ್ಷಿಣಿಗೆ ತಲಾ 5000 ರೂ.ನ್ನು ಹಸ್ತಾಂತರಿಸಿ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದ್ದಾರೆ.
ಇದೇ ಸಂದರ್ಭದಲ್ಲಿ ಪೆರ್ಡೂರಿನ ಗುಲಾಬಿ ಕುಲಾಲ್ ಅವರ ಚಿಕಿತ್ಸೆಗೆ 7500 ರೂ.ನ್ನು ಅವರು ಹಸ್ತಾಂತರಿಸಿ ಸಾಮಾಜಿಕ ಕಳಕಳಿ ಮೆರದಿದ್ದಾರೆ.
ನೆರವು ನೀಡಿದ 30000 ರೂ.ಮೊತ್ತದಲ್ಲಿ ದಾನಿ ಭಗವಾನ್ದಾಸ್ ಅಡ್ಯಂತಾಯ ಹಾಗೂ ವಿಶು ಶೆಟ್ಟಿ ಅಂಬಲಪಾಡಿ ಅವರು ತಲಾ 15000 ರೂ. ಭರಿಸಿದ್ದಾರೆ.