News Karnataka Kannada
Saturday, April 27 2024
ಉಡುಪಿ

ಶಿಕ್ಷಣ, ಚಿಕಿತ್ಸೆಗೆ ಸಮಾಜ ಸೇವಕರಿಂದ ನೆರವು

Assistance from social workers for education and treatment
Photo Credit : News Kannada

ಉಡುಪಿ: ಪ್ರಸಿದ್ಧ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ದಾನಿ ಉಡುಪಿ ಅಜ್ಜರಕಾಡಿನ ಭಗವಾನ್‌ದಾಸ್ ಅಡ್ಯಂತಾಯ ಅವರು ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮೂರು ಮಂದಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹಾಗೂ ಅನಾರೋಗ್ಯ ಪೀಡಿತ ಬಡ ಮಹಿಳೆಯ ಚಿಕಿತ್ಸೆಗೆ ಒಟ್ಟು 30000 ರೂ. ಆರ್ಥಿಕ ನೆರವು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ ಕಾಪು ಅವರಿಗೆ15,500 ರೂ., ಅಶ್ವಿನಿ ಹಾಗೂ ಹಾಗೂ ಉಡುಪಿಯ ವರ್ಷಿಣಿಗೆ ತಲಾ 5000 ರೂ.ನ್ನು ಹಸ್ತಾಂತರಿಸಿ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದ್ದಾರೆ.

ಇದೇ ಸಂದರ್ಭದಲ್ಲಿ ಪೆರ್ಡೂರಿನ ಗುಲಾಬಿ ಕುಲಾಲ್ ಅವರ ಚಿಕಿತ್ಸೆಗೆ 7500 ರೂ.ನ್ನು ಅವರು ಹಸ್ತಾಂತರಿಸಿ ಸಾಮಾಜಿಕ ಕಳಕಳಿ ಮೆರದಿದ್ದಾರೆ.
ನೆರವು ನೀಡಿದ 30000 ರೂ.ಮೊತ್ತದಲ್ಲಿ ದಾನಿ ಭಗವಾನ್‌ದಾಸ್ ಅಡ್ಯಂತಾಯ ಹಾಗೂ ವಿಶು ಶೆಟ್ಟಿ ಅಂಬಲಪಾಡಿ ಅವರು ತಲಾ 15000 ರೂ. ಭರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು