ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್ವೊಂದು ಉಡುಪಿ ತಾ|ಲಕ್ಷ್ಮೀಂದ್ರ ನಗರದ ಜನೌಷಧಿ ಕೇಂದ್ರದ ಒಳಗೆ ನುಗ್ಗಿದೆ.
ಇಂದು (ಡಿ.02) ನಸುಕಿನ ಜಾವ ಘಟನೆ ನಡೆದಿದೆ. ಜನೌಔಷಧಿ ಕೇಂದ್ರ ಮುಚ್ಚಿದ್ದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ. ಘಟನೆಯಲ್ಲಿ ಆಂಬುಲೆನ್ಸ್ ಚಾಲಕನಿಗೆ ಗಂಭೀರ ಗಾಯವಾಗಿದೆ. ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.