News Karnataka Kannada
Thursday, May 02 2024
ಉಡುಪಿ

ಸ್ಕೂಟರ್ ಸವಾರನನ್ನು ತಪ್ಪಿಸಲು ಹೋಗಿ ಹಾಲಿನ ಕ್ರೇಟ್‌ಗೆ ಡಿಕ್ಕಿ ಹೊಡೆದ ಪಿಕಪ್

https://www.bing.com/translator?ref=TThis&from=kn&to=en&isTTRefreshQuery=1
Photo Credit : News Kannada

ಉಡುಪಿ: ಪಿಕಪ್ ವಾಹನವೊಂದು ಮಿಲ್ಕ್ ಬೂತ್ ನ ಮುಂಭಾಗದಲ್ಲಿ ಇಟ್ಟಿದ್ದ ಹಾಲಿನ ಕ್ರೇಟ್‌ಗೆ ಡಿಕ್ಕಿ ಹೊಡೆದ ಭಯಾನಕ ಘಟನೆ ಉಡುಪಿಯ ಕಡಿಯಾಳಿಯಲ್ಲಿ ಇಂದು ನಸುಕಿನ ವೇಳೆ ನಡೆದಿದೆ.

ಕಡಿಯಾಳಿಯಿಂದ ಉಡುಪಿ ಕಡೆಗೆ ಅತೀ‌ ವೇಗವಾಗಿ ಹೋಗುತ್ತಿದ್ದ ಪಿಕಪ್ ವಾಹನದ ಚಾಲಕ, ಸ್ಕೂಟರ್ ಸವಾರನನ್ನು ತಪ್ಪಿಸುವ ಭರದಲ್ಲಿ ಹಾಲಿನ ಕ್ರೇಟ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಕೂದಲೆಳೆಯಂತರದಲ್ಲಿ ಸ್ಕೂಟರ್ ಸವಾರ ಪಾರಾಗಿದ್ದಾನೆ. ಪಿಕಪ್ ಡಿಕ್ಕಿ ಹೊಡೆದ ರಭಸಕ್ಕೆ ಹಾಲಿನ ಕ್ರೇಟ್ ಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಾವಿರಾರು ರೂ. ನಷ್ಟ ಸಂಭವಿಸಿದೆ ಎಂದು‌ ತಿಳಿದು ಬಂದಿದೆ.

ಹಾಲಿನ‌ ಪಾಕೇಟ್ ಗಳನ್ನು ಕೊಂಡೊಯ್ಯಲು‌ ಬಂದ ಇನ್ನೋರ್ವ ಸ್ಕೂಟರ್ ಸವಾರನು ಅಪಾಯದಿಂದ ಪಾರಾಗಿದ್ದಾನೆ. ಆತ ಹಾಲಿನ ಪ್ಯಾಕೇಟ್ ಗಳನ್ನು‌ ತೆಗೆದುಕೊಂಡು ಹೋದ ಕೆಲವೇ ಸೆಕೆಂಡ್ ನಲ್ಲಿ‌ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು