ಮಲ್ಪೆ: ಕೊಪ್ಪಳ ಜಿಲ್ಲೆ ಬನಕಟ್ಟಿ ಗ್ರಾಮದ ಮೂವರು ಪ್ರವಾಸಿಗರು ಉಡುಪಿಗೆ ಪ್ರವಾಸಕ್ಕೆಂದು ಬಂದಿದ್ದರು.ಅ.14 ರ ಗುರುವಾರ ಸಂಜೆ ಮಲ್ಪೆಯ ಸಮುದ್ರದಲ್ಲಿ ಆಡುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತಿದ್ದ ಮೂವರನ್ನು ಮಲ್ಪೆಯ ಜೀವರಕ್ಷಕ ತಂಡದ ಸದಸ್ಯರು ಸುರಕ್ಷಿತವಾಗಿ ದಡಕ್ಕೆ ಕರೆತಂದು ರಕ್ಷಿಸಿದ ಘಟನೆ ವರದಿಯಾಗಿದೆ.ಸಂಜೆ 5:20ರ ಸುಮಾರಿಗೆ ಮಲ್ಪೆಯ ಸಮುದ್ರದಲ್ಲಿ ಇಳಿದು ಆಟವಾಡುತ್ತಿದ್ದಾಗ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ರಕ್ಷಣೆಗೆ ಧುಮುಕಿದ ಮಲ್ಪೆ ಲೈಫ್ಗಾರ್ಡ್ ಸದಸ್ಯರು ಪವನ್ ಮಡಿಲಾ (21), ಚೇತನ (19) ಹಾಗೂ ಪ್ರಿಯದರ್ಶಿನಿ (20) ಇವರನ್ನು ರಕ್ಷಿಸಿ ಸುರಕ್ಷಿತವಾಗಿ ಮೇಲಕ್ಕೆ ಕರೆ ತಂದರು.
ಸಮುದ್ರ ಪಾಲಾಗುತ್ತಿದ್ದ ಮೂವರ ರಕ್ಷಣೆ- ಮಲ್ಪೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.