News Karnataka Kannada
Tuesday, May 07 2024
ಉಡುಪಿ

ರೈಲ್ವೆ ಪೊಲೀಸರ ಸಕಾಲಿಕ ಕಾರ್ಯಾಚರಣೆ : ಬಾಲಕಿ ರಕ್ಷಣೆ

Railway Delhi 17 6 21 Dt 176216 1 Newsk 9508623154
Photo Credit :

ಉಡುಪಿ : ಡಿ.13ರಂದು ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಅಪಹರಿಸಲಾದ 16ರ ಹರೆಯದ ಬಾಲಕಿಯನ್ನು ಕೊಂಕಣ ರೈಲ್ವೆ ಪೊಲೀಸ್ ಪಡೆ ರಕ್ಷಿಸಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಈ ಕುರಿತು ಮಲ್ಪೆ ಠಾಣೆಯಲ್ಲಿ ದಾಖಲಾದ ಎಫ್ ಐಆರ್ ಹಿನ್ನೆಲೆಯಲ್ಲಿ ಉಡುಪಿ ರೈಲ್ವೆ ನಿಲ್ದಾಣದ ರೈಲ್ವೆ ಪೊಲೀಸರು ನಿಲ್ದಾಣದ ಸಿಸಿ ಟಿವಿ ದೃಶ್ಯಾವಳಿ ಹಾಗೂ ರೈಲ್ವೆ ರಿಸರ್ವೇಶನ್ ಪಟ್ಟಿಯನ್ನು ಪರಿಶೀಲಿಸಿದಾಗ, ಈ ಬಾಲಕಿ ಕುರ್ಲಾದತ್ತ ತೆರಳುತ್ತಿದ್ದ ರೈಲು ನಂ.22114ನ್ನು ಹತ್ತಿರುವುದನ್ನು ಖಚಿತಪಡಿಸಿ ಕೊಂಡರು.

ತಕ್ಷಣ ಅವರು ಕೆಆರ್ ಸಿಎಲ್ ನ ಕಂಟ್ರೋಲ್ ರೂಮಿಗೆ ಮಾಹಿತಿಯನ್ನು ರವಾನಿಸಿದರು. ಮಾಹಿತಿಯನ್ನನುಸರಿಸಿ ಕುರ್ಲಾದ ಇನ್ ಸ್ಪೆಕ್ಟರ್ ಅವರು ಕಾಶಿಯತ್ತ ತೆರಳುತಿದ್ದ ರೈಲು ನಂ.15017ನ್ನು ಪರಿಶೀಲಿಸಿದಾಗ ಇದರ ಎಸ್ ಕೋಚ್ ನ ಬರ್ತ್ ನಂ.11ರಲ್ಲಿ ಈ ಬಾಲಕಿ ಪತ್ತೆಯಾದಳು. ಬಾಲಕಿಯ ಬಗ್ಗೆ ಹಾರ್ದಾ ಆರ್ ಪಿಎಫ್ ನಿಂದ ಮಾಹಿತಿ ಸಂಗ್ರಹಿಸಿ ಅದನ್ನು ಮಲ್ಪೆ ಪೊಲೀಸರಿಗೆ ರವಾನಿಸಲಾಗಿದೆ.

ಉಡುಪಿ ರೈಲ್ವೆ ಪೊಲೀಸ್ ಪಡೆಯ ಇನ್ ಸ್ಪೆಕ್ಟರ್ ಅಮಿತ್ ಯಾದವ್, ಕಾನ್ ಸ್ಟೇಬಲ್ ಸಜೀರ್ ಹಾಗೂ ಮಹಿಳಾ ಕಾನ್ ಸ್ಟೇಬಲ್ ಝೀನಾ ಪಿಂಟೊ ಅವರ ಅವಿರತ ಪ್ರಯತ್ನಗಳಿಂದ ಅಪಹೃತ ಬಾಲಕಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು