News Karnataka Kannada
Sunday, April 28 2024
ಕ್ಯಾಂಪಸ್

ಮಣಿಪಾಲ: ಪಲ್ಸ್ ಪೋಲಿಯೋ ಜಾಗೃತಿ ಕಲಾಕೃತಿ ಅನಾವರಣ

Manipal
Photo Credit :
ಉಡುಪಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನಾಚರಣೆಯ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ ಮಣಿಪಾಲ‌ ಇದರ ಸಹಯೋಗದೊಂದಿಗೆ ವಿಭಾಗದ ಕಲಾವಿದ ಶ್ರೀನಾಥ್ ಮಣಿಪಾಲ ಅವರು ರಚಿಸಿದ ಕಲಾಕೃತಿಯನ್ನು ಶನಿವಾರ ಅನಾವರಣಗೊಳಿಸಲಾಯಿತು.
ಸುಮಾರು 2,000 ಹಳೆಯ ಲಸಿಕೆಗಳ ಬಾಟಲಿಗಳನ್ನು ಬಳಸಿ ‘ಎರಡು ಹನಿ‌ ಲಸಿಕೆ-ಮಗುವಿನ ಆರೋಗ್ಯಕ್ಕೆ ಬುನಾದಿ’ ಎಂಬ ಘೋಷಣೆಯಡಿ ಮಗುವಿಗೆ ಪೋಲಿಯೋ ಲಸಿಕೆ ನೀಡಲಾಗುವ ಜಾಗೃತಿ ಕಲಾಕೃತಿಯನ್ನು ರಚಿಸಿದ್ದರು.
ಈ ಕಲಾಕೃತಿಯನ್ನು ಶನಿವಾರ ಮಣಿಪಾಲದ ಕೆ.ಎಂ.ಸಿ ಗ್ರೀನ್ಸ್ ನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಹಾಗೂ ಕೆ.ಎಂ.ಸಿ ಮಣಿಪಾಲದ ಡೀನ್ ಡಾ.ಶರತ್ ರಾವ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್, ಸಹ ಪ್ರಾಧ್ಯಾಕರಾದ ಡಾ.ಮುರುಳೀಧರ್ ಕುಲಕರ್ಣಿ, ಡಾ.ರಂಜಿತಾ ಶೆಟ್ಟಿ, ಡಾ.ಸ್ನೇಹಾ ಕಾಮತ್, ಡಾ.ದಿವ್ಯಾ ಪೈ,  ಸಹ ಪ್ರಾಧ್ಯಾಪಕಿ ಡಾ.ಈಶ್ವರಿ, ಕಲಾವಿದ ಶ್ರೀನಾಥ್ ಮಣಿಪಾಲ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು