ಉಡುಪಿ : ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಹೊರಿಸಿ, ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಶವವನ್ನು ಕೊನೆಗೂ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.
ನಿನ್ನೆ ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿಯ ಶಾಂಭವಿ ಹೋಟೆಲ್ಸ್ ಬೋರ್ಡಿಂಗ್ ಆಯಂಡ್ ಲಾಡ್ಜಿಂಗ್ನ ರೂಂ ನಂಬರ್ 207ರಲ್ಲಿ ಸಂತೋಷ್ ಶವವಾಗಿ ಪತ್ತೆಯಾಗಿದ್ದರು. ಆದರೆ ನಿನ್ನೆಯೇ ಅವರ ಶವಪರೀಕ್ಷೆ ಮಾಡಿಸಲು ಕುಟುಂಬಸ್ಥರಿಂದ ವಿರೋಧವಿತ್ತು. ಸಂತೋಷ್ ಸಹೋದರ ಬರುವವರೆಗೂ ಶವ ಲಾಡ್ಜ್ನಲ್ಲೇ ಇರಲಿ ಎಂದು ಅವರ ಪತ್ನಿಯೂ ಒತ್ತಾಯಿಸಿದ್ದರು. ಹೀಗಾಗಿ ನಿನ್ನೆ ಪೋಸ್ಟ್ ಮಾರ್ಟಂ ಆಗಿರಲಿಲ್ಲ.
ಇಂದು ಸಂತೋಷ್ ಸಾವಿಗೀಡಾದ ಸುಮಾರು 40 ಗಂಟೆಗಳ ಬಳಿಕ ಮಣಿಪಾಲ ಆಸ್ಪತ್ರೆಯ ಪಕ್ಕದಲ್ಲಿರವು ಪೋಸ್ಟ್ ಮಾರ್ಟಂ ಕೇಂದ್ರಕ್ಕೆ ಶವವನ್ನು ಕೊಂಡೊಯ್ಯಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಉಡುಪಿಯಿಂದ ಮಣಿಪಾಲಕ್ಕೆ ಸಂತೋಷ್ ಶವ ತರಲಾಗಿದ್ದು, ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಪಾಟೀಲ್ ಕುಟುಂಬಸ್ಥರೂ ಆಗಮಿಸಿದ್ದಾರೆ.