News Karnataka Kannada
Tuesday, April 30 2024
ಕರಾವಳಿ

ಅಪಘಾತದಲ್ಲಿ ವಿದ್ಯಾರ್ಥಿ ಸಾವು: ಸರ್ವ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ 

Student dies in accident: Protest by all college students
Photo Credit :

ಮೂಡುಬಿದಿರೆ: ಅಪಘಾತದಲ್ಲಿ ಮೃತಪಟ್ಟ ಆಳ್ವಾಸ್ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿ ದಿ ಕಾರ್ತಿಕ್ ಕುಟುಂಬಕ್ಕೆ ನ್ಯಾಯ ಕೊಡುವಂತೆ ಒತ್ತಾಯಿಸಿ ಮೂಡುಬಿದಿರೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಘಟನಾ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಭರವಸೆಯಿತ್ತರು.

ಸೋಮವಾರ ಪೋಲೀಸ್, ಆರ್ ಟಿ ಒ, ಬಸ್ಸು ಮಾಲಕರ, ಶಿಕ್ಷಣ ಸಂಸ್ಥೆ ಪ್ರತಿನಿಧಿ, ವಿದ್ಯಾರ್ಥಿ ಪ್ರತಿನಿಧಿಗಳ ಸಭೆ ನಡೆಸುವುದಾಗಿ ತಿಳಿಸಿದರು. ಅಫಘಾತಕ್ಕೆ ಕಾರಣವಾದ ರೇಷ್ಮಾ ಬಸ್ ಮಾಲಕ ರು, ಬಸ್ ಮಾಲಕರ ಸಂಘದ ಮುಖಂಡರು ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಬಸ್ಸು ಮಾಲಕರ ಪ್ರತಿನಿಧಿಗೆ ವಿದ್ಯಾರ್ಥಿಗಳು ನ್ಯಾಯ ಕೋರಿ ಮನವಿಯಿತ್ತರು. ವಿದ್ಯಾರ್ಥಿ ಪ್ರಮುಖರಾದ ನಿಶಾನ್ ಆಳ್ವ, ರಿತಿನ್ ಶೆಟ್ಟಿ, ರಫೀಝ್ ಮಾತನಾಡಿ ಬಸ್ ಅವಸರದ ಚಾಲನೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದರು. ದುರ್ಘಟನೆ ನಂತರ ವಿದ್ಯಾರ್ಥಿಗಳಿಗೆ ಬಸ್ಸು ನಿಲ್ಲಿಸದಿರುವುದು, ಶುಲ್ಕ ರಿಯಾಯಿತಿ ತೋರದೆ ತೊಂದರೆ ನೀಡುತ್ತಿರುವುದಾಗಿ ಶಾಸಕರಲ್ಲಿ ತಿಳಿಸಿದರು. ಮೃತ ಬಾಲಕನ ತಂದೆ ಚಂದ್ರಹಾಸ ಆಚಾರ್ಯ ಹಾಗೂ ಮನೆಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು