News Karnataka Kannada
Monday, April 29 2024
ಕರಾವಳಿ

ಪುತ್ತೂರು: ವಿಶೇಷ ಚೇತನ ಮಕ್ಕಳಿಗಾಗಿ ಕಟ್ಟಡ ನಿರ್ಮಾಣ ಕಾಮಗಾರಿ ವಿಚಾರದಲ್ಲಿ ತಿಕ್ಕಾಟ

Puttur
Photo Credit : News Kannada

ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಸುಮಾರು 158 ವರ್ಷ ಇತಿಹಾಸವಿರುವ ಸರಕಾರಿ ಶಾಲೆಯಲ್ಲಿ ಶಾಲಾ ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶಾಸಕರ ನಡುವೆ ಕಟ್ಟಡದ ವಿಚಾರದಲ್ಲಿ ತಿಕ್ಕಾಟವೊಂದು ಶರುವಾಗಿದೆ. ಹೌದು. . ಶಾಲೆಯ ಜಾಗದಲ್ಲಿ ವಿಶೇಷ ಚೇತನದ ಮಕ್ಕಳಿಗಾಗಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲಾಗ್ತಿದೆ.

ಆದರೆ ಕಟ್ಟಡವನ್ನು ರಸ್ತೆಯ ಪಕ್ಕದಲ್ಲೇ ಇರುವ ಜಾಗದಲ್ಲಿ ಕಟ್ಟುವಂತೆ ಪೋಷಕರ ಮತ್ತು ಹಳೆ ವಿದ್ಯಾರ್ಥಿಗಳ ಮನವಿ ಮಾಡಿಕೊಂಡಿದ್ದಾರೆ. ಆದರೆ ಮನವಿಯನ್ನು ತಿರಸ್ಕರಿಸಿ ಶಾಲೆಯ ಆವರಣದ ಒಳಗೆ ಕಟ್ಟಲು ಶಾಸಕ ಅಶೋಕ್ ಕುಮಾರ್ ರೈ ನಿರ್ಧಾರಿಸಿದ್ದಾರೆ. ಹೀಗಾಗಿ ಕಾಮಗಾರಿ ನಡೆಸದಂತೆ ಪೋಷಕರ, ಹಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸುಮಾರು 3 ಎಕರೆ ವಿಸ್ತೀರ್ಣವಿರುವ ಶಾಲೆಯು 158 ವರ್ಷ ಇತಿಹಾಸವನ್ನ ಹೊಂದಿದೆ. ಇದನ್ನು ಮುಗಿಸುವ ಪ್ರಯತ್ನ ಮಾಡಲಾಗ್ತಿದೆ ಎಂಬ ಆರೋಪ ಕೇಳಿ ಬರ್ತಿದೆ.

ಈಗಾಗಲೇ ಅಸ್ತವ್ಯಸ್ತವಾಗಿ ಶಾಲೆ ನಡೆಯುತ್ತಿದೆ. ಒಂದು ಕಡೆ ತರಗತಿ, ಇನ್ನೊಂದು ಕಡೆ ಅಕ್ಷರ ದಾಸೋಹ ಕೊಠಡಿ, ಇನ್ನೊಂದೆಡೆ ನಲಿಕಲಿ ತರಗತಿ, ಮತ್ತೊಂದೆಡೆ ಸಾರ್ಟ್ ಕ್ಲಾಸ್. ಇದರ ಜೊತೆಗೆ ಶಾಲೆಯ ಆವರಣದೊಳಗೆ ಪ್ರಾಥಮಿಕ ಆರೋಗ್ಯ ಕೇಂದ್ರ. ಇನ್ನೊಂದು ಪಕ್ಕದಲ್ಲಿ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ. ಇದರಿಂದಾಗಿ ತರಗತಿ ಸಮಯದಲ್ಲಿ ಶಾಲೆಯ ಆವರಣದಲ್ಲಿ ಓಡಾಡುವ ವಾಹನಗಳು
ಮಕ್ಕಳಿಗೆ ಬೇಕಾದ ಸರಿಯಾದ ಆಟದ ಮೈದಾನದ ಕೊರತೆಯಿದೆ. ಇನ್ನು ಆಟವಾಡುವ ಮಕ್ಕಳ ಮಧ್ಯೆ ಸಂಚರಿಸುವ ವಾಹನಗಳು. ಇದರಿಂದ ಭಯದ ವಾತಾವರಣ ಉಂಟಾಗಿದೆ. ಈ ಎಲ್ಲಾ ಅವ್ಯವಸ್ಥೆಗಳ ನಡುವೆ ಇನ್ನೊಂದು ಕಛೇರಿ ಆರಂಭದ ಪ್ರಯತ್ನಸುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ವಿರೋಧ ಮಾಡಲು ಬಂದ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳ ವಿರುದ್ಧ ಅಧಿಕಾರಿ ಮುಗಿಬಿದ್ದಿದ್ದಾರೆ.
ಎಲ್ಲರ ವಿಡಿಯೋ ಮಾಡಿ ಬಂಧಿಸುವ ಎಚ್ಚರಿಕೆಯನ್ನು ಅಧಿಕಾರಿ ನೀಡಿದ್ದಾರೆ. ಅಲ್ಲದೇ ಅಧಿಕಾರಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿಸದ್ದಾರೆ. ಇನ್ನು ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಆಕ್ರೋಶ ಸ್ಪಲ್ಪ ತಿಳಿಯಾಗಿದೆ. ಬೇರೆ ಕಟ್ಟಡಗಳಿಗೆ ಹಾಕುವ ಹಣವನ್ನು ಹೊಸ ಶಾಲಾ ಕಟ್ಟಡ ಕಟ್ಟಲು ವಿನಿಯೋಗಿಸುವಂತೆ ಸ್ಥಳೀಯರು ಒತ್ತಾಯಸಿದ್ದಾರೆ. ಕಟ್ಟಡ ಕಟ್ಟಿ ಅದು ಮತ್ತೊಂದು ಅನೈತಿಕ ಚಟುವಟಿಕೆಗಳ ಕೇಂದ್ರವಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಶಾಲೆಯ ಆವರಣದಲ್ಲಿ ಇತರೆ ಯಾವುದೇ ಸರಕಾರಿ ಕಛೇರಿ ಇರದಂತೆ ಮನವಿ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು