ಮಂಗಳೂರು: ಮಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿರುವ ಅವರು, ನನಗೆ ಲೋಕಸಭಾ ಚುನಾವಣೆ ಸಂಬಂಧ ದ.ಕ ಜಿಲ್ಲೆಯ ಜವಾಬ್ದಾರಿ ಕೊಟ್ಟಿದ್ದಾರೆ. 15 ದಿನಗಳ ಒಳಗೆ ಅಭ್ಯರ್ಥಿ ಬಗ್ಗೆ ಪ್ರಾಥಮಿಕ ವರದಿ ಕೊಡಲು ಹೇಳಿದ್ದಾರೆ. ಈ ಬಾರಿ ದ.ಕ ಲೋಕಸಭಾ ಕ್ಷೇತ್ರ ನಾವು ಗೆಲ್ಲಲೇ ಬೇಕು. ಇವತ್ತಿನಿಂದ ಆ ಪ್ರಕ್ರಿಯೆಯನ್ನ ನಾನು ಆರಂಭಿಸ್ತಾ ಇದೀನಿ. ಈಗ ಜೆಡಿಎಸ್ ಬಿಜೆಪಿ ಜೊತೆ ಹೊರಟು ಹೋಯ್ತಲ್ಲ. ಜೆಡಿಎಸ್ ಎಲ್ಲೋಯ್ತು ಗೊತ್ತೇ ಇಲ್ಲ, ಕಾಂಗ್ರೆಸ್ ಕೋಮುವಾದಿ ಅಂತಿದ್ರು.
ಈಗ ಅದೇ ಕೋಮುವಾದಿಗಳ ಜೊತೆ ಇವರು ಹೋಗಿದ್ದಾರೆ. ದ.ಕ ಜಿಲ್ಲೆಯಲ್ಲಿ ಬಿಜೆಪಿ ಅಭಿವೃದ್ಧಿ ಮೇಲೆ ಗೆದ್ದಿಲ್ಲ. ಇವರು ಭಾವನಾತ್ಮಕ ವಿಚಾರಗಳ ಮೇಲೆ ಇವರು ಗೆದ್ದಿದ್ದಾರೆ. ಮಂಗಳೂರಿನಲ್ಲಿ ಜನರ ಮನಸ್ಸು ಗೆಲ್ಲಲು ಈ ಬಾರಿ ಅವಕಾಶ ಇದೆ. ಜನಾರ್ದನ ಪೂಜಾರಿ ಮಾರ್ಗದರ್ಶನ ಕೂಡ ಕೇಳಲಿದ್ದೇನೆ. ಇಡೀ ರಾಜ್ಯದ ಹಲವು ಜೆಡಿಎಸ್ ಮುಖಂಡರು ನನ್ನ ಜೊತೆ ಸಂಪರ್ಕ ಇದಾರೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಿಂದ ಕೆಲವರಿಗೆ ನೋವಾಗಿದೆ. ಹೀಗಾಗಿ ತತ್ವ ಸಿದ್ದಾಂತಕ್ಕೆ ಧಕ್ಕೆಯಾದಾಗ ನಿರ್ಧಾರ ತೆಗೋತಾರೆ. ಮಂಗಳೂರಿನ ಹಲವು ಜೆಡಿಎಸ್ ಮುಖಂಡರು ಕೂಡ ಸಂಪರ್ಕದಲ್ಲಿ ಇದ್ದಾರೆ. ನೀವು ನೋಡ್ತೀರಾ, ಸದ್ಯದಲ್ಲಿ ಅವರು ನಿರ್ಧಾರ ತೆಗೋತಾರೆ ಎಂದು ಹೇಳಿಕ ನೀಡಿದ್ದಾರೆ.