News Karnataka Kannada
Sunday, May 12 2024
ಮಂಗಳೂರು

ಈ ಬಾರಿ ದ.ಕ ಲೋಕಸಭಾ ಕ್ಷೇತ್ರ ನಾವು ಗೆಲ್ಲಲೇ ಬೇಕು: ಶಿಕ್ಷಣ ಸಚಿವ ಮಧು ಬಂಗಾರಪ್ಪ

We must win Dakshina Kannada Lok Sabha seat this time: Education Minister Madhu Bangarappa
Photo Credit : News Kannada

ಮಂಗಳೂರು: ಮಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿರುವ ಅವರು, ನನಗೆ ಲೋಕಸಭಾ ಚುನಾವಣೆ ಸಂಬಂಧ ದ.ಕ ಜಿಲ್ಲೆಯ ಜವಾಬ್ದಾರಿ ಕೊಟ್ಟಿದ್ದಾರೆ. 15 ದಿನಗಳ ಒಳಗೆ ಅಭ್ಯರ್ಥಿ ಬಗ್ಗೆ ಪ್ರಾಥಮಿಕ ವರದಿ ಕೊಡಲು ಹೇಳಿದ್ದಾರೆ. ಈ ಬಾರಿ ದ.ಕ ಲೋಕಸಭಾ ಕ್ಷೇತ್ರ ನಾವು ಗೆಲ್ಲಲೇ ಬೇಕು. ಇವತ್ತಿನಿಂದ ಆ ಪ್ರಕ್ರಿಯೆಯನ್ನ ನಾನು ಆರಂಭಿಸ್ತಾ ಇದೀನಿ. ಈಗ ಜೆಡಿಎಸ್ ಬಿಜೆಪಿ ಜೊತೆ ಹೊರಟು ಹೋಯ್ತಲ್ಲ. ಜೆಡಿಎಸ್ ಎಲ್ಲೋಯ್ತು ಗೊತ್ತೇ ಇಲ್ಲ, ಕಾಂಗ್ರೆಸ್ ಕೋಮುವಾದಿ ಅಂತಿದ್ರು.

ಈಗ ಅದೇ ಕೋಮುವಾದಿಗಳ ಜೊತೆ ಇವರು ಹೋಗಿದ್ದಾರೆ. ದ‌.ಕ ಜಿಲ್ಲೆಯಲ್ಲಿ ಬಿಜೆಪಿ ಅಭಿವೃದ್ಧಿ ಮೇಲೆ ಗೆದ್ದಿಲ್ಲ. ಇವರು ಭಾವನಾತ್ಮಕ ವಿಚಾರಗಳ ಮೇಲೆ ಇವರು ಗೆದ್ದಿದ್ದಾರೆ. ಮಂಗಳೂರಿನಲ್ಲಿ ಜನರ ಮನಸ್ಸು ಗೆಲ್ಲಲು ಈ ಬಾರಿ ಅವಕಾಶ ಇದೆ. ಜನಾರ್ದನ ಪೂಜಾರಿ ಮಾರ್ಗದರ್ಶನ ಕೂಡ ಕೇಳಲಿದ್ದೇನೆ. ಇಡೀ ರಾಜ್ಯದ ಹಲವು ಜೆಡಿಎಸ್ ಮುಖಂಡರು ನನ್ನ ಜೊತೆ ಸಂಪರ್ಕ ಇದಾರೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಿಂದ ಕೆಲವರಿಗೆ‌ ನೋವಾಗಿದೆ. ಹೀಗಾಗಿ ತತ್ವ ಸಿದ್ದಾಂತಕ್ಕೆ ಧಕ್ಕೆಯಾದಾಗ ನಿರ್ಧಾರ ತೆಗೋತಾರೆ. ಮಂಗಳೂರಿನ ಹಲವು ಜೆಡಿಎಸ್ ಮುಖಂಡರು ಕೂಡ ಸಂಪರ್ಕದಲ್ಲಿ ಇದ್ದಾರೆ. ನೀವು ನೋಡ್ತೀರಾ, ಸದ್ಯದಲ್ಲಿ ಅವರು ನಿರ್ಧಾರ ತೆಗೋತಾರೆ ಎಂದು ಹೇಳಿಕ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು