ಉಪ್ಪಿನಂಗಡಿ: ದಿನಾಂಕ 26-8-2022ರಂದು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ದ.ಕ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, 7 ಪ್ರಥಮ ಸ್ಥಾನ, 5 ದ್ವಿತೀಯ ಸ್ಥಾನ ಹಾಗೂ 3 ತೃತೀಯ ಸ್ಥಾನ ಪಡೆದುಒಟ್ಟು 15 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಶಿಶುವರ್ಗ ವಿಭಾಗದ ವೇದಗಣಿತ ರಸಪ್ರಶ್ನೆಯಲ್ಲಿ 5ನೇ ತರಗತಿಯ ಭೂಮಿಕಾ, ಸುಶ್ಮಿತಾ ಭಟ್, ಬಿನಿತ್ ಪ್ರಥಮ ಸ್ಥಾನ, ವಿಜ್ಞಾನ ರಸಪ್ರಶ್ನೆಯಲ್ಲಿ 5ನೇ ತರಗತಿಯ ಕಾರ್ತಿಕೇಯ, ಸುಹಾನ್ ಹಾಗೂ 4ನೇ ತರಗತಿಯ ಮುಕುಂದ ಕೃಷ್ಣ ದ್ವಿತೀಯ ಸ್ಥಾನ, ಗಣಿತ ಪ್ರದರ್ಶನದಲ್ಲಿ 5ನೇ ತರಗತಿಯಆರಾಧ್ಯತೃತೀಯ ಸ್ಥಾನ, ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಲಶುದ್ಧೀಕರಣ ಮತ್ತು ಸಂರಕ್ಷಣೆ ವಿಷಯದಲ್ಲಿ 5ನೇ ತರಗತಿಯಜಾನ್ವಿ ಹಾಗೂ 4ನೇ ತರಗತಿಚಾರಿತ್ರ್ಯ ಪ್ರಥಮ ಸ್ಥಾನ, ಆಹಾರ ಶೃಂಖಲೆ ಎಂಬ ವಿಷಯದಲ್ಲಿ 5ನೇ ತರಗತಿಯ ಮಾನಸ ಹಾಗೂ ಸಾಧ್ವಿ ಪ್ರಥಮ ಸ್ಥಾನ, ಸೃಜನಾತ್ಮಕ ಮಾದರಿ ಪ್ರದರ್ಶನದಲ್ಲಿ 5ನೇ ತರಗತಿಯ ಹವೀಶ್ ಹಾಗೂ ಘನಶ್ಯಾಮದ್ವಿತೀಯ ಸ್ಥಾನ, ಶಕ್ತಿಯ ಸ್ಥಿರೀಕರಣ ಎಂಬ ವಿಷಯದಲ್ಲಿ 5ನೇ ತರಗತಿಯಆರಾಧನ ಹಾಗೂ 4ನೇ ತರಗತಿಯ ಅನರ್ಘ್ಯಾ ತೃತೀಯ ಸ್ಥಾನ ಪಡೆದಿರುತ್ತಾರೆ.
ಬಾಲವರ್ಗ ವಿಭಾಗದಗಣಿತ ಪ್ರದರ್ಶನದಲ್ಲಿ 7ನೇ ತರಗತಿಯದಕ್ಷ ಪ್ರಥಮ ಸ್ಥಾನ, ಗಣಿತ ಲೇಖನ ವಾಚನದಲ್ಲಿ ವೈಷ್ಣವಿ ಕಡ್ಯ ದ್ವಿತೀಯ ಸ್ಥಾನ, ತಂತು ಮತ್ತು ವಸ್ತ್ರಉತ್ಪಾದನೆ ಪ್ರತಿರೂಪ ಎಂಬ ಮಾದರಿ ಪ್ರದರ್ಶನದಲ್ಲಿ 7ನೇ ತರಗತಿಯ ಬ್ರಾಹ್ಮೀ ಹಾಗೂ ಪ್ರೇಕ್ಷಾ ಪ್ರಥಮ ಸ್ಥಾನ, ಸೃಜನಾತ್ಮಕ ಮಾದರಿ ಪ್ರದರ್ಶನದಲ್ಲಿ 7ನೇ ತರಗತಿಯ ದಿಶಾನ್ ಮತ್ತು ಶ್ರೀಹರಿ ಪ್ರಥಮ ಸ್ಥಾನ, ಬೆಳಕು ಮತ್ತುಅದರ ಅನ್ವಯಿಕಗಳು ಎಂಬ ವಿಷಯದಲ್ಲಿ 7ನೇ ತರಗತಿಯ ಮೋನಿಷಾ ಹಾಗೂ ಸಾನ್ವಿಕಾಮತ್ ಪ್ರಥಮ ಸ್ಥಾನ ಹಾಗೂ ವಾಯು ಮತ್ತು ಜಲ ನೈರ್ಮಲ್ಯ ವಿಷಯದಲ್ಲಿ 7ನೇ ತರಗತಿಯ ವಂಶಿ ಪಿ ಮತ್ತು ಚಿನ್ಮಯಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.