News Karnataka Kannada
Monday, April 29 2024
ಮಂಗಳೂರು

ಸುರತ್ಕಲ್: ಶಾಸಕ ಡಾ. ಭರತ್ ಶೆಟ್ಟಿ ಅವರಿಂದ ಹಕ್ಕುಪತ್ರ ವಿತರಣೆ

After 40 years, i got the title deed. Distribution by Bharath Shetty
Photo Credit : News Kannada

ಸುರತ್ಕಲ್: ಇಲ್ಲಿನ ಮಾಟೆಗುರಿಯಲ್ಲಿ ಸರಕಾರಿ ಡಿಸಿ ಮನ್ನಾ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದು, ಒಕ್ಕಲೇಳುವ ಭೀತಿಯಲ್ಲಿದ್ದ 19 ಕುಟುಂಬಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ತಮ್ಮ ಸುರತ್ಕಲ್ ಕಚೇರಿಯಲ್ಲಿ ಗುರುವಾರ ಹಕ್ಕು ಪತ್ರ ವಿತರಿಸುವ ಮೂಲಕ ಶುಭ ಹಾರೈಸಿದರು.

ಇದರಿಂದ ಕಳೆದ 40 ವರ್ಷಗಳಿಂದ ಸದಾ ಭೀತಿಯಲ್ಲಿಯೇ ಬದುಕು ಸವೆಸುತ್ತಿದ್ದ 19 ಕುಟುಂಬಗಳು ನಿಟ್ಟುಸಿರುಬಿಟ್ಟಿವೆ. ಕಾನೂನಾತ್ಮಕವಾಗಿ ಹೋರಾಟ ನಡೆಸಿ ,ತಿದ್ದುಪಡಿ ಮಾಡುವ ಮೂಲಕ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಂಡ ಶಾಸಕರಿಗೆ ಜನತೆ ಕೃತಜ್ಞತೆ ಸಲ್ಲಿಸಿದರು.

 

ಹಲವಾರು ಶಾಸಕರನ್ನು ಕಂಡಿದ್ದೇವೆ. ಈ ಕೆಲಸ ಆಗದು ಎಂದು ಕೈ ಬಿಟ್ಟವರೇ ಹೆಚ್ಚು. ಆದರೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ಛಲ, ಮುತುವರ್ಜಿಯಿಂದ ನಮಗೆ ಸ್ವಂತ ಸೂರು ಸಿಕ್ಕುವಂತಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ಶಾಸಕರು ಮಾತನಾಡಿ, ಈ ಕುಟುಂಬಗಳಿಗೆ ಹಕ್ಕು ಪತ್ರ ಒದಗಿಸಿರುವುದು ನನ್ನ ಶ್ರೇಷ್ಟ ಕಾರ್ಯಗಳಲ್ಲಿ ಒಂದಾಗಿದೆ .ಇದರ ಹಿಂದೆ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರು,ಮನಪಾ ಸದಸ್ಯರನ್ನು ಶ್ಲಾಘಿಸಿದರು.

ಮನಪಾ ಸದಸ್ಯ ವರುಣ್ ಚೌಟ, ಪ್ರಮುಖರಾದ ರಮಾನಾಥ್ ಕುಲಾಲ್ , ರಮೇಶ್ ಕೋಡಿಕೆರೆ ಅಬೂಬಕರ್,ಉಪತಹಶೀಲ್ದಾರ್ ನವೀನ್ ಕಂದಾಯ ಆದಿಕಾರಿ ರವಿಪ್ರಸಾದ್ ಮಲ್ಯ, ಗ್ರಾಮ ಕರಣಿಕ ಉಮೇಶ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು