News Karnataka Kannada
Monday, April 29 2024
ಮಂಗಳೂರು

ಸುಳ್ಯ: ಸೇನಾ ದಿನಾಚರಣೆ, ಅರಂತೋಡಿನ ಯೋಧ ಆಕಾಶ್ ಗೆ ಹಿರಿಯ ಅಧಿಕಾರಿಗಳಿಂದ ಗೌರವ

Army Day celebrations: Akash, a soldier from Aranthod, felicitated by senior officials
Photo Credit : News Kannada

ಸುಳ್ಯ: ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಐದು ಜನ ಭಾರತೀಯ ನಾಗರಿಕರನ್ನು ರಕ್ಷಿಸಿದ ಅರಂತೋಡು ಓಟೆಡ್ಕ ಆಕಾಶ್ ಅವರನ್ನು ಭಾರತೀಯ ಭೂಸೇನಾಧಿಕಾರಿ ಜನರಲ್ ಮೇಜರ್ ರವರು ಭಾರತೀಯ ಸೇನಾ ದಿನಾಚರಣೆ ಆದ ಇಂದು (ಜ. 15 ರಂದು) ಗೌರವಿಸಿದರು.

ಕಳೆದ ಬಾರಿ ಅವರು ಬೆಸ್ಟ್ ಫೈರರ್ ಪ್ರಶಸ್ತಿ ಪಡೆದುಕೊಂಡಿದ್ದರು. ಇವರು ಅರಂತೋಡು ಗ್ರಾಮದ ಓಟೆಡ್ಕ ಕಮಲಾಕ್ಷ ಮತ್ತು ದಮಯಂತಿ ದಂಪತಿಗಳ ಪುತ್ರ.

ಪ್ರಾಥಮಿಕ ಶಿಕ್ಷಣವನ್ನು ಕಿರ್ಲಾಯ ಮತ್ತು ಅಡ್ತಲೆ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಅರಂತೋಡು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದಿರುತ್ತಾರೆ. ಸಹೋದರಿ ಗುಣಶ್ರೀ ಅಡ್ತಲೆ ಸ.ಹಿ‌.ಪ್ರಾ. ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು